Urdu   /   English   /   Nawayathi

ನದಿಯಲ್ಲಿ ಮುಳುಗಿದ ಕಾರು... ಕಾರಿನಲ್ಲಿದ್ದ ವಧು-ವರ ಸ್ವಲ್ಪದರಲ್ಲೇ ಪಾರು

share with us

ಜಾರ್ಖಂಡ್/ಪಲಾಮು​​: 21 ಜೂನ್ 2020 (ಫಿಕ್ರೋಖಬರ್ ಸುದ್ದಿ) ನದಿಯ ಪ್ರವಾಹಕ್ಕೆ ಸಿಲುಕಿದ್ದ ವಧು-ವರನನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಜಾರ್ಖಂಡ್​ ರಾಜ್ಯದ ಪಲಾಮುವಿನಲ್ಲಿ ನಡೆದಿದೆ. ಪಲಾಮು ಜಿಲ್ಲೆಯ ಲೆಸ್ಲಿಗಂಜ್​​ ಪ್ರದೇಶದ ದಿಗ್ವಿಜಯ್​ ಸಿಂಗ್​ ಮತ್ತು ಲತೇಹಾರ್​ ನಿವಾಸಿ ಖುಷ್ಬು ಕುಮಾರಿ ಇಬ್ಬರು ದೇವಸ್ಥಾನವೊಂದರಲ್ಲಿ ವಿವಾಹವಾಗಿ ಮೆರವಣಿಗೆಯೊಂದಿಗೆ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಮಲಯ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಕಾರ್​ ನೀರಿನಲ್ಲಿ ತೇಲುತ್ತಾ ಸಾಗಿತು. ಆದರೆ ಸ್ವಲ್ಪ ದೂರ ತೆರಳಿ ಒಂದು ಸ್ಥಳದಲ್ಲಿ ಸಿಲುಕಿಕೊಂಡಿತ್ತು. ನಂತರ ಸ್ಥಳಕ್ಕೆ ಜಮಾಯಿಸಿದ ನೂರಾರು ಸ್ಥಳೀಯರು ನದಿಗೆ ಜಿಗಿದು ಕಾರಿಗೆ ಹಗ್ಗ ಕಟ್ಟಿ ಮೇಲೆಳೆದ್ರು. ಕೊನೆಗೆ ಸ್ಥಳೀಯರ ಸಹಾಯದಿಂದ ನವದಂಪತಿ ಬದುಕುಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا