Urdu   /   English   /   Nawayathi

ಉಡುಪಿ: ತರಕಾರಿ ಸಾಗಾಟದ ಟೆಂಪೋ ಅಪಘಾತ ಇಬ್ಬರ ಮೃತ್ಯು

share with us

ಉಡುಪಿ: 18 ಜೂನ್ 2020 (ಫಿಕ್ರೋಖಬರ್ ಸುದ್ದಿ) ಕುಂದಾಪುರದಿಂದ ಆದಿಉಡುಪಿಗೆ ತರಕಾರಿ ಖರೀದಿಸಲ ಬರುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದ್ದು. ಈ ದುರ್ಘಟನೆಯಲ್ಲಿ ಚಾಲಕ ಸೇರಿದಂತೆ ಸಹ ಪ್ರಯಾಣಿಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ 66 ರ ಅಂಬಾಗಿಲು ಬಳಿ ಇಂದು ಮುಂಜಾನೆ 6.30 ರ ಸುಮಾರಿಗೆ ನಡೆದಿದೆ.

    

ಮೃತಪಟ್ಟವರನ್ನುಕುಂದಾಪುರದ ಕಂದಾವರ ದಿನೇಶ್ (35 )ಮತ್ತು ಮಂಜುನಾಥ್ (27 ) ಎಂದು ಗುರುತಿಸಲಾಗಿದೆ. ಇವರು ತರಕಾರಿ ವ್ಯಾಪಾರವನ್ನ ಮಾಡುತ್ತಿದ್ದು ಇಂದು ಮುಂಜಾನೆ ಕುಂದಾಪುರದಿಂದ ಆದಿಉಡುಪಿಗೆ ತರಕಾರಿ ಖರೀದಿಸಲು ಟೆಂಪೋ ಟ್ರಾಕ್ಸ್ನಲ್ಲಿ ತೆರಳಿದ್ದ ಸಮಯ ಅಂಬಾಗಿಲು ಬಳಿ ಸ್ವಾಗತ ಕೋರುವ ಕಂಬಕ್ಕೆ ಟ್ರಾಕ್ಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ದಿನೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಂಜುನಾಥ್ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದಾರೆ. ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉ, ಟೈ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا