Urdu   /   English   /   Nawayathi

ಕಾಡು ಪ್ರಾಣಿ ಎಂದು ಸ್ನೇಹಿತನ ಮೇಲೆ ಹಾರಿಸಿದ ಗುಂಡು

share with us

ಉತ್ತರ ಕನ್ನಡ: 16 ಜೂನ್ 2020 (ಫಿಕ್ರೋಖಬರ್ ಸುದ್ದಿ) ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಬೇಟೆಗೆಂದು ತೆರಳಿದ್ದ ಯುವಕರ ಗೊಂಪೊಂದು ತನ್ನ ಸ್ನೇಹಿತನನ್ನೇ ಕಾಡು ಪ್ರಾಣಿ ಎಂದು ಧಾವಿಸಿ ಗುಂಡು ಹಾರಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ ಮುಷ್ತಾಕ್ ಎಂದು ಹೇಳಲಾಗಿದೆ. ಐದು ಗೆಳೆಯರ ಗುಂಪೊಂದು ರಾತ್ರಿಯ ವೇಳೆ ಬೇಟೆಗೆಂದು ತೆರಳಿದ್ದು, ಎಲ್ಲಾ ಗೆಳೆಯರು ಬೇಟೆಯಾಡಲು ಚದುರಿದ್ದಾರೆ. ಈ ವೇಳೆ ಮುಷ್ತಾಕ್ ಇದ್ದ ಕಡೆಯಿಂದ ಶಬ್ದ ಬಂದ ನಂತರ ಗೆಳೆಯರಲ್ಲೊಬ್ಬ ಕಾಡು ಪ್ರಾಣಿ ಎಂದು ತಿಳಿದು ಗುಂಡು ಹಾರಿಸಿದ್ದಾನೆ. ಗುಂಡು ಮುಷ್ತಾಕ್ ಎಂಬಾತನ ಎದೆಗೆ ತಗುಲಿದ ಪರಿಣಾಮ ಈತ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಈತನಿಗೆ ಹುಬ್ಬಳ್ಳಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದ ನಾಲ್ವರ ಜೊತೆಗೆ ಬೇಟೆಯಾಡಲು ಬಳಸಿದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಮುಂಡಗೋಡ್ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا