Urdu   /   English   /   Nawayathi

ದ್ವೇಷದ ಕಿಡಿ ಹತ್ತಿಸುವ ಸಂಸದೆ ಶೋಭಾ ಕರಂದ್ಲಾಜೆಯವರನ್ನು ಬಂಧಿಸಿ: ಟ್ವಿಟ್ಟರ್ ನಲ್ಲಿ ಒತ್ತಾಯ

share with us

ಬೆಂಗಳೂರು: 12 ಮೇ 2020 (ಫಿಕ್ರೋಖಬರ್ ಸುದ್ದಿ) ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರನ್ನು ಬಂಧಿಸಿ ಎಂಬ ಅಭಿಯಾನ ಟ್ವಿಟ್ಟರ್ ನಲ್ಲಿ ಆರಂಭವಾಗಿದೆ. ಇಡೀ ದೇಶ ಕೊರೋನಾ ಸೋಂಕಿನ ವಿರುದ್ಧ ಸೆಣಸಾಡುತ್ತಿರುವಾಗ ಸಂಸದೆ ಶೋಭಾ ಕರಂದ್ಲಾಜೆ ಜನರಲ್ಲಿ ದ್ವೇಷದ ಭಾವನೆಯನ್ನು ಹರಡುತ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಜನರು ದೂಷಿಸಿದ್ದಾರೆ. ತಮ್ಮ ವಿವಾದಿತ ಹೇಳಿಕೆಗಳು ಮತ್ತು ಮಾತುಗಳಿಂದ ಆಗಾಗ ಸುದ್ದಿಯಾಗುವ ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಗ್ರೀನ್ ಝೋನ್ ಆಗಿದ್ದ ಶಿವಮೊಗ್ಗದಲ್ಲಿ ತಬ್ಲಿಘಿಗಳಿಂದ ಸೋಂಕು ಹರಡಿ ಏಳು ಮಂದಿಗೆ ಸೋಂಕು ಹರಡಿದ್ದ ಬಗ್ಗೆ ಟ್ವೀಟ್ ಮಾಡಿ ತಬ್ಲಿಘಿಗಳು ದೇಶಕ್ಕೆ ಕಂಟಕ ಎಂದು ಬರೆದಿದ್ದರು. ಹೀಗೆ ಟ್ವೀಟ್ ಮಾಡಿದ್ದೇ ತಡ ಸಾವಿರಾರು ಟ್ವೀಟ್ ಗಳಲ್ಲಿ ಅವರ ವಿರುದ್ಧ ಟೀಕೆಗಳ ಸುರಿಮಳೆಯೇ ಹರಿದುಬಂತು. ಅರೆಸ್ಟ್ ಶೋಭಾ ಕರಂದ್ಲಾಜೆ ಎಂದು ಹ್ಯಾಶ್ ಟಾಗ್ ಮಾಡಿ ಅವರನ್ನು ಬಂಧಿಸುವಂತೆ ಒತ್ತಾಯಿಸಲಾಯಿತು. ದೇಶದಲ್ಲಿ ವಿವಿಧ ಜಾತಿ, ಧರ್ಮಗಳ ನಡುವೆ ದ್ವೇಷದ ಕಿಚ್ಚು ಹತ್ತಿಸುವ ಶೋಭಾ ಕರಂದ್ಲಾಜೆಯವರನ್ನು ಭಾರತೀಯ ದಂಡ ಸಂಹಿತೆ 153(ಎ)ಯಡಿ ಬಂಧಿಸಿ ಎಂದು ಒತ್ತಾಯಿಸಲಾಯಿತು.

Shobha Karandlaje@ShobhaBJP

are nightmare to the whole country!

They misbehaved with our & also mislead entire country by hiding their presence in .

GREEN Shimogga turns RED by these irresponsible Jihadis, real intention behind their behaviour must be probed!

View image on Twitter

1,786

8:00 PM - May 10, 2020

Twitter Ads info and privacy

1,206 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا