Urdu   /   English   /   Nawayathi

ಕಾರ್ಪೊರೇಟರ್​​ ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಜಟಾಪಟಿ: ಪರಿಸ್ಥಿತಿ ನಿಭಾಯಿಸಿದ ಡಿಸಿಪಿ

share with us

ಬೆಂಗಳೂರು: 10 ಮೇ 2020 (ಫಿಕ್ರೋಖಬರ್ ಸುದ್ದಿ) ಕೆ.ಆರ್.ಮಾರ್ಕೆಟ್ ವಾರ್ಡ್​​ನ ಟಿಪ್ಪು ನಗರ ಬಳಿ ಕೊರೊನಾ ಸೋಂಕು ಪತ್ತೆಯಾದ ಕಾರಣ ಏರಿಯಾವನ್ನು ಸೀಲ್​​​ಡೌನ್​ ಮಾಡಿ ಕಾರ್ಪೊರೇಟರ್ ನಾಜೀಮಾ ಆಯೂಬ್ ಖಾನ್ ಸೇರಿದಂತೆ ಹಲವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ನಿನ್ನೆ ರಾತ್ರಿ ಕ್ವಾರಂಟೈನ್ ಇರುವ ಕಾರ್ಪೊರೇಟರ್ ಹೊರಗಡೆ ಬಂದಿದ್ದಾರೆ. ಈ ವೇಳೆ ಮಫ್ತಿಯಲ್ಲಿದ್ದ ಪೊಲೀಸರು ಇದನ್ನು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಕಾರ್ಪೊರೇಟರ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನು ರಾತ್ರಿ ನಡೆದ ಮಾತಿನ ಚಕಮಕಿ ಇಟ್ಟುಕೊಂಡು ಕಾರ್ಪೊರೇಟರ್ ಹಾಗೂ ಬೆಂಬಲಿಗರು ಇಂದು ಪ್ರತಿಭಟನೆ ಮಾಡಿ ಕಾರ್ಪೊರೇಟರ್​​ಗೆ ಮರ್ಯಾದೆ ಕೊಡದಿದ್ದರೆ ಹೇಗೆ? ಪೊಲೀಸರು ಯೂನಿಫಾರ್ಮ್​​​ ಹಾಕಿರಲಿಲ್ಲ. ಕಾರ್ಪೊರೇಟರ್ ತಲೆನೋವು ಅಂತ ಆಸ್ಪತ್ರೆಗೆ ಹೋಗಿದ್ದಾರೆ, ವಿನಾಕಾರಣ ಓಡಾಟ ‌ಮಾಡಿಲ್ಲವೆಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರ ಮನವೊಲಿಸಲು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಭೇಟಿ ನೀಡಿ ಟಿಪ್ಪು ನಗರ ಕಂಟೇನ್​​ಮೆಂಟ್​​ ಝೋನ್​​ ಆಗಿದೆ. ಇಲ್ಲಿ ಜನರ ಓಡಾಟಕ್ಕೆ ಅವಕಾಶ ಇಲ್ಲ, ವೈದ್ಯಕೀಯ ಕಾರಣ ಬಿಟ್ಟು ಯಾರು ಓಡಾಡುವಂತಿಲ್ಲ. ನಿನ್ನೆ ಕಾರ್ಪೊರೇಟರ್ ಹೊರ ಬಂದಾಗ ಇನ್ಸ್‌ಪೆಕ್ಟರ್ ಯಾಕೆ ಹೊರಬಂದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಮಾತಿನ ಚಕಮಕಿ ನಡೆದಿದೆ. ಸದ್ಯ ಸ್ಥಳೀಯ ಜನನಾಯಕರು ಇವರ ಮನವೊಲಿಸಿದ್ದು, ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಇನ್ನು ಮುಂದೆ ಯಾರು ಸಹ ಓಡಾಡುವಂತಿಲ್ಲ ರಾತ್ರಿ ಗಲಾಟೆ ಕುರಿತು ತನಿಖೆ ಮಾಡಿ ಪರಿಶೀಲನೆ ಮಾಡ್ತೇವೆ ಎಂದು ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا