Urdu   /   English   /   Nawayathi

ಉಡುಪಿ: ಮಂಡ್ಯ ಸೋಂಕಿತನಿಂದ 18 ಮಂದಿ ಕ್ವಾರಂಟೈನ್ ಗೆ

share with us

ಉಡುಪಿ: 29 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಮಂಡ್ಯ ಜಿಲ್ಲೆಯ ಕೋವಿಡ್‌–19 ಸೋಂಕಿತ ವ್ಯಕ್ತಿ ಉಡುಪಿಯಲ್ಲಿ ವಾಸ್ತವ್ಯ ಹೂಡಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿರುವ 18 ಮಂದಿಯನ್ನು ಕ್ವಾರಂಟೈನ್ ಮಾಡಿದೆ. ಮುಂಬೈನಿಂದ ಮಂಡ್ಯ ತಲುಪುವ ಮಾರ್ಗ ಮಧ್ಯೆ ಏ.21 ಹಾಗೂ 22 ರಂದು ಸೋಂಕಿತ ಜಿಲ್ಲೆಯ ಯಾವೆಲ್ಲ ಭಾಗಗಳಿಗೆ ಭೇಟಿ ಕೊಟ್ಟಿದ್ದಾನೆ ಎಂಬ ಮಾಹಿತಿಯನ್ನು ಟೋಲ್‌ಗೇಟ್‌ ಹಾಗೂ ಪೆಟ್ರೋಲ್‌ ಬಂಕ್‌ಗಳ ಸಿಸಿಟಿವಿ ಕ್ಯಾಮೆರಾಗಳಿಂದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೋಂಕಿತ ರಾತ್ರಿ ಊಟ ಮಾಡಿದ್ದ ಹಾಗೂ ಉಳಿದುಕೊಂಡಿದ್ದ ತೆಕ್ಕಟ್ಟೆಯ ಪೆಟ್ರೋಲ್ ಬಂಕ್‌ ಅನ್ನು ಮುಚ್ಚಲಾಗಿದ್ದು, ಅದರ ಮಾಲೀಕ ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಹಾಗೆಯೇ, ಸಾಸ್ತಾನ ಟೋಲ್‌ ಸಿಬ್ಬಂದಿಯನ್ನೂ ಕ್ವಾರಂಟೈನ್‌ನಲ್ಲಿಡಲಾಗಿದ್ದು, ಸೋಂಕಿತನ ಸಂಪರ್ಕಕ್ಕೆ ಬಂದ ಎಲ್ಲರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ, ಇನ್ನೆರಡು ದಿನದಲ್ಲಿ ವರದಿ ಬರಲಿದೆ.

ಉ, ಟೈ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا