Urdu   /   English   /   Nawayathi

ಅಬಕಾರಿ ಅಧಿಕಾರಿಗಳ ದಾಳಿ: 23 ಲೀಟರ್​ ಕಳ್ಳಭಟ್ಟಿ‌ ವಶ

share with us

ಮಂಗಳೂರು: 21 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಮೂಡುಬಿದಿರೆ ತಾಲೂಕಿನ ಪುಚ್ಚೆಮೊಗರು ಗ್ರಾಮದ ಮೂಡುಬಿದಿರೆ-ಬಂಟ್ವಾಳ ಸೇತುವೆಯ ಕೆಳಗೆ ನಡೆಯುತ್ತಿದ್ದ ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 23 ಲೀಟರ್​ ಕಳ್ಳಭಟ್ಟಿ‌ ವಶಪಡಿಸಿಕೊಂಡಿದ್ದಾರೆ. ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಕೋಟೆ ನಿರ್ದೇಶನದಂತೆ ಉಪ ಅಧೀಕ್ಷಕ ಅಮರನಾಥ ಭಂಡಾರಿ ಮಾರ್ಗದರ್ಶನದಂತೆ ಅಬಕಾರಿ ನಿರೀಕ್ಷಕ ಹರೀಶ್ ಕುಮಾರ್ ಸಿಬ್ಬಂದಿಯೊಂದಿಗೆ ಸಂಜೆ 4ರ ಸುಮಾರಿಗೆ ದಾಳಿ ನಡೆಸಿ 20 ಲೀಟರ್​ ಗೇರು ಹಣ್ಣಿನ ಹುಳಿ ರಸ, 23 ಲೀಟರ್​​ ಕಳ್ಳಭಟ್ಟಿ ಹಾಗೂ ಪಾತ್ರೆ ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭ ಆರೋಪಿ ಆನಂದ ಪೂಜಾರಿ ಎಂಬಾತ ಪರಾರಿಯಾಗಿದ್ದಾನೆ. ಈ ಬಗ್ಗೆ ಮಂಗಳೂರು ಪೂರ್ವ ವಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا