Urdu   /   English   /   Nawayathi

ಏ. 21ರ ಮಧ್ಯರಾತ್ರಿವರೆಗೂ ಲಾಕ್​ಡೌನ್​ನಲ್ಲಿ ಯಾವುದೇ ಸಡಿಲಿಕೆ ಇಲ್ಲ: ಸಿಎಂ ಕಚೇರಿ ಸ್ಪಷ್ಟನೆ

share with us

ಬೆಂಗಳೂರು: 19 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ರಾಜ್ಯಾದ್ಯಂತ ಜಾರಿಯಲ್ಲಿರುವ ಲಾಕ್​ಡೌನ್ ಏಪ್ರಿಲ್‌ 21ರ ಮಧ್ಯರಾತ್ರಿಯವರೆಗೂ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟಪಡಿಸಿದೆ. ಈವರೆಗೆ ಲಾಕ್​ಡೌನ್​ನಲ್ಲಿ ಯಾವುದೇ ಸಡಿಲಿಕೆ ಮಾಡಿಲ್ಲ. ಏಪ್ರಿಲ್ 21ರ ಮಧ್ಯರಾತ್ರಿಗೂ ಮೊದಲು ಹೊಸ ಆದೇಶ ಹೊರಡಿಸಲು ಯೋಚಿಸಿದ್ದು, ಅಲ್ಲಿಯವರೆಗೆ ಲಾಕ್​ಡೌನ್​ನಲ್ಲಿ ಯಾವುದೇ ಸಡಿಲಿಕೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಮಂಚೆ ಕಂಟೈನ್​ನ್ಮೆಂಟ್​​ ವಲಯಗಳನ್ನು ಹೊರತುಪಡಿಸಿ ಲಾಕ್​ಡೌನ್ ಸಡಿಲಿಕೆ ಮಾಡಿ, ದ್ವಿಚಕ್ರ ವಾಹನ ಸಂಚಾರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದ್ದು, ಆದೇಶವನ್ನು ಮತ್ತೆ ವಾಪಸ್ ಪಡೆಯಲಾಗಿದೆ. ಈ ಮಧ್ಯೆ ಇಂದು ಮತ್ತೆ ಅಂತಹ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಜನರಿಗೆ‌ ಗೊಂದಲವಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 21ರ ಮಧ್ಯರಾತ್ರಿವರೆಗೂ ಈಗ ಇರುವ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا