Urdu   /   English   /   Nawayathi

ಕೊಲೆ ಪ್ರಕರಣದ ಆರೋಪಿ ಹತ್ಯೆ ಯತ್ನ

share with us

ಮಂಗಳೂರು: 18 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಕೊಲೆ ಪ್ರಕರಣದ ಪ್ರಮುಖ ಆರೋಪಿ ಧೀರಜ್ ಪೂಜಾರಿ ಎಂಬಾತನನ್ನು ಐದು ಮಂದಿಯ ತಂಡವೊಂದು ಶುಕ್ರವಾರ ನಗರದ ಹೊರವಲಯದ ತಣ್ಣೀರುಬಾವಿಯ ಗಣೇಶಕಟ್ಟೆ ಬಳಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದೆ. ರೌಡಿ ಶೀಟರ್ ಭರತೇಶ್ ಸಹೋದರ ಶಿವರಾಜ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧೀರಜ್ ಪೂಜಾರಿಯನ್ನು ಕೊಲೆ ಮಾಡಲು ತಂಡವೊಂದು ಯತ್ನಿಸಿದೆ. ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ ಧೀರಜ್ ಪೂಜಾರಿ, ಶುಕ್ರವಾರ ತಣ್ಣೀರುಬಾವಿ ಗಣೇಶಕಟ್ಟೆ ಬಳಿಯ ತನ್ನ ಮನೆಯ ಹತ್ತಿರ ನಿಂತಿದ್ದಾಗ ಸ್ಕ್ರೂಡೈವರ್ ನವೀನ್, ಸುನೀಲ್ ಹಾಗೂ ಇತರ ಮೂವರ ತಂಡವು ಕೊಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಧೀರಜ್‌ನ ತಾಯಿ ಹಾಗೂ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا