Urdu   /   English   /   Nawayathi

ಗುಜರಾತ್​​ನಲ್ಲಿ ಸಿಲುಕಿದ ಪುತ್ತೂರಿನ ಯುವಕರು: ಲಾಕ್​​​ಡೌನ್​​ನಿಂದ ಕಾರಿನಲ್ಲಿಯೇ ವಾಸ!

share with us

ದಕ್ಷಿಣ ಕನ್ನಡ ಪುತ್ತುರು): 14 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಲಾಕ್​ಡೌನ್​ ಘೋಷಣೆಯಾಗಿದ್ದರಿಂದ ರಾಜ್ಯದ ಹಲವು ಜನರು ನೆರೆಯ ರಾಜ್ಯಗಳಲ್ಲಿ ಸಿಲುಕಿದ್ದಾರೆ. ಇದೀಗ ಪುತ್ತೂರಿನ ಇಬ್ಬರು ಯುವಕರು ಗುಜರಾತ್​​ನಲ್ಲಿ ಸಿಲುಕಿದ್ದು, ಕಳೆದ 21 ದಿನಗಳಿಂದ ತಮ್ಮ ಕಾರಿನಲ್ಲಿಯೇ ಉಳಿಯುವ ಪರಿಸ್ಥಿತಿ ಬಂದೊದಗಿದೆ. ವೃತ್ತಿಯಲ್ಲಿ ಅಡಕೆ ಸುಫಾರಿ ವ್ಯಾಪಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಪುತ್ತೂರಿನ ಯುವಕರಿಬ್ಬರು ಕಳೆದ 21 ದಿನಗಳಿಂದ ಗುಜರಾತ್​ನ ಚೆಕ್ ಪೋಸ್ಟ್ ಬಳಿ ಕಾರೊಂದರಲ್ಲಿ ಅನಾಥ ಬದುಕು ಸಾಗಿಸುತ್ತಾ ಆತಂಕದಲ್ಲಿದ್ದಾರೆ. ದೇಶದಲ್ಲಿ ಲಾಕ್‌ಡೌನ್ ಜಾರಿಗೊಳ್ಳುವ ಎರಡು ದಿನಗಳ ಮೊದಲು ಗುಜರಾತ್ ರಾಜ್ಯದ ರಾಜ್‌ಕೋಟಾದಿಂದ ನಿಸ್ಸಾನ್ ಮೈಕ್ರಾ ಕಾರಲ್ಲಿ ಪುತ್ತೂರಿಗೆ ಹೊರಟಿದ್ದ ಈ ಯುವಕರು ಸುಮಾರು 500 ಕಿ.ಮೀ. ದೂರ ಪ್ರಯಾಣ ಮಾಡಿದ್ದರು. ಗುಜರಾತ್​ನ ವಲ್ಸಾಡ್ ಜಿಲ್ಲೆಯ ಅಂಬರ್‌ಗಾವ್ ಭಿಲಾಡ್ ತಾಲೂಕಿನ ಚೆಕ್ ಪೋಸ್ಟ್ ಬಳಿ ಅವರು ಸಿಲುಕಿಕೊಂಡಿದ್ದು, ಅತ್ತ ವಾಪಸ್​ ಹೋಗಲಾರದೆ ಇತ್ತ ತಮ್ಮ ಊರಾದ ಪುತ್ತೂರಿಗೂ ಬರಲಾಗದೆ ಪರದಾಡುತ್ತಿದ್ದಾರೆ. ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ ಎಂಬ ಈ ಯುವಕರು ಇದೀಗ ತಮ್ಮ ದಿನದ ಬಹುಭಾಗವನ್ನು ಕಾರಿನೊಳಗೆಯೇ ಕಳೆಯುತ್ತಿದ್ದಾರೆ. ಈ ನಡುವೆ ಸ್ಥಳೀಯರ ಸಹಾಯದಿಂದ ಊಟೋಪಚಾರ ದೊರೆತಿದ್ದರೂ ಊರಿಗೆ ಬರಲಾಗದೆ ಕಾಲ ಕಳೆಯುವಂತಾಗಿದೆ. ಸದ್ಯ ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್​ ಗಮನ ಸೆಳೆದಿದ್ದು, ಈ ಇಬ್ಬರೂ ಯುವಕರಿಗೆ ಊಟದ ವ್ಯವಸ್ಥೆಯೂ ಸೇರಿ ಸೂಕ್ತ ವಸತಿ ಒದಗಿಸುವಂತೆ ಗುಜರಾತ್​ನ ವೆಲ್ಸಾಡ್​​​ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا