Urdu   /   English   /   Nawayathi

ಹೊಸಪೇಟೆ: ಸಚಿವ ಆನಂದ್ ಸಿಂಗ್'ರ ಆಹಾರ ಕಿಟ್ ಬಳಸಿ ಕೋಮು ಪ್ರಚೋದನೆಗೆ ಮುಂದಾಗಿದ್ದ ಯುವಕನ ಬಂಧನ

share with us

ಹೊಸಪೇಟೆ: 13 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ಮಾಡುವ ಪೋಸ್ಟ್‌ ಹಂಚಿಕೆ ಮಾಡಿದ ಶಿವರಾಜ್ ಎಂಬ ಯುವಕನನನ್ನು ಹಂಪಿ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ನಿವಾಸಿ ಶಿವರಾಜ ನನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಬಡವರಿಗೆ ವಿತರಿಸಲು ಆಹಾರದ ಕಿಟ್‌ಗಳನ್ನು ಸಿದ್ಧಪಡಿಸುತ್ತಿರುವ ಚಿತ್ರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಆನಂದ್ ಸಿಂಗ್‌ ಮುಸ್ಲಿಮರಿಂದ ಕಿಟ್‌ಗಳನ್ನು ತಯಾರಿಸುತ್ತಿದ್ದಾರೆ. ಅದರಿಂದ ಕೊರೊನಾ ಸೋಂಕು ತಗುಲಬಹುದು. ಹಾಗಾಗಿ ಯಾರೂ ಕಿಟ್‌ಗಳನ್ನು ಪಡೆಯಬಾರದು ಎಂದು ಶಿವರಾಜ ಪೋಸ್ಟ್‌ ಮಾಡಿದ್ದ ಈ ಸಂಭಂದ ಬಿಜೆಪಿ ಕಾರ್ಯಕರ್ತ ಬಸವರಾಜ ಎನ್ನುವವರು ಭಾನುವಾರ ದೂರು ದಾಖಲಿಸಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا