Urdu   /   English   /   Nawayathi

ಬಂಟ್ವಾಳ ಪುರಸಭೆ ಪೊಲೀಸ್ ರಕ್ಷಣೆಯಲ್ಲಿ ಕಸ ವಿಲೇವಾರಿ : ವಿರೋಧಿಸಿದವರ ಬಂಧನ

share with us

ಬಂಟ್ವಾಳ: 18 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಬಂಟ್ವಾಳ ಪುರಸಭೆಯ ಒಣಕಸವನ್ನು ಸಜೀಪನಡು ಗ್ರಾಮದ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವಿಲೇವಾರಿಗೆ ಸಾಗಿಸಿದ ಸಂದರ್ಭ ಅದನ್ನು ವಿರೋಧಿಸಿದ ಗ್ರಾಮಸ್ಥರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪುರಸಭೆ ಹಾಗೂ ಸಜೀಪನಡು ಗ್ರಾಮಸ್ಥರ ಮಧ್ಯೆ ಪರ-ವಿರೋಧದ ಹೋರಾಟಗಳು ನಡೆಯುತ್ತಿದ್ದು, ಬುಧವಾರ ಕಸದ ವಾಹನ ಬರುತ್ತದೆ ಎಂದು ಮಾಹಿತಿ ತಿಳಿದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಘಟಕದ ಮುಂದೆ ಜಮಾಯಿಸಿದ್ದರು.

ಕಸದ ವಾಹನ ಆಗಮಿಸುತ್ತಿದ್ದಂತೆ ಅಡ್ಡ ನಿಂತು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರನ್ನು ಲಾಠಿ ಚಾರ್ಜ್ ನಡೆಸಿ ಚದುರಿಸಿ ಕೆಲವರನ್ನು ವಶಕ್ಕೆ ಪಡೆದರು. ಬಳಿಕ ಕಸವನ್ನು ವಿಲೇವಾರಿ ನಡೆಸಲಾಯಿತು.

  

     

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا