Urdu   /   English   /   Nawayathi

ರಾಜ್ಯಸಭೆ ಚುನಾವಣೆ - ಕುದುರೆ ವ್ಯಾಪಾರಕ್ಕೆ ಹೆದರಿದ ಕಾಂಗ್ರೆಸ್: ​ ಶಾಸಕರೆಲ್ಲ ಛತ್ತೀಸಗಢ್​ಗೆ ಶಿಫ್ಟ್​!

share with us

ಗಾಂಧಿನಗರ: 14 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಮಾರ್ಚ್ 26ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್​ ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಇದೀಗ ಕಾಂಗ್ರೆಸ್​ ಪಕ್ಷ ಕುದುವೆ ವ್ಯಾಪಾರಕ್ಕೆ ಹೆದರಿಕೊಂಡಿರುವ ಕಾರಣ ತನ್ನ ಶಾಸಕರನ್ನು ಛತ್ತೀಸಗಢ್​ ಅಥವಾ ಮಹಾರಾಷ್ಟ್ರಕ್ಕೆ ಶಿಫ್ಟ್​ ಮಾಡುವ ಯೋಚನೆ ನಡೆಸಿದೆ. ಮಧ್ಯಪ್ರದೇಶದಲ್ಲಿ ಈಗಾಗಲೇ ಕಾಂಗ್ರೆಸ್​ ರಾಜಕೀಯ ಬಿಕ್ಕಟ್ಟು ಅನುಸರಿಸುತ್ತಿರುವ ಕಾರಣ, ಬಿಜೆಪಿ ಕುದುರೆ ವ್ಯಾಪಾರ ನಡೆಸಿ, ಕೆಲವೊಂದು ಕಾಂಗ್ರೆಸ್​ ಶಾಸಕರನ್ನ ಬೆಂಗಳೂರಿನಲ್ಲಿ ಕೂಡಿ ಹಾಕಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಗುಜರಾತ್​​ನಲ್ಲಿ ತನ್ನ ಶಾಸಕರನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ. 182 ಶಾಸಕರನ್ನೊಳಗೊಂಡಿರುವ ಗುಜರಾತ್​ನಲ್ಲಿ ಬಿಜೆಪಿ 103 ಹಾಗೂ ಕಾಂಗ್ರೆಸ್​ 73 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಎರಡು ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸುವ ಇರಾದೆ ಇಟ್ಟುಕೊಂಡಿದೆ. ರಾಜ್ಯಸಭಾ ಸದಸ್ಯರು ಆಯ್ಕೆಗೊಳ್ಳಬೇಕಾದರೆ 37 ಮತಗಳನ್ನ​ ಪಡೆದುಕೊಳ್ಳುವ ಅವಶ್ಯಕತೆ ಇದ್ದು, ಉಳಿದ ವೋಟ್​​ ಪಕ್ಷೇತರ ಅಭ್ಯರ್ಥಿ ಜಿಗ್ನೇಶ್​ ಮೇವಾನಿಗೆ ಹಾಕುವ ನಿರ್ಧಾರ ಕೈಗೊಂಡಿದೆ. ಬಿಜೆಪಿ ಮೂವರು ಅಭ್ಯರ್ಥಿಗಳನ್ನ ಕಣಕ್ಕಿಳಿಸಿರುವ ಕಾರಣ ಅವರು ಗೆಲುವು ಸಾಧಿಸಬೇಕಾದರೆ 111 ವೋಟ್​ ಬೇಕಾಗಿದ್ದು, ಐದು ವೋಟ್​ ಕಡಿಮೆ ಬೀಳಲಿವೆ. ಅವುಗಳನ್ನ ಕಾಂಗ್ರೆಸ್​ನಿಂದ ಪಡೆದುಕೊಳ್ಳಲು ಕಾಂಗ್ರೆಸ್​ ಶಾಸಕರಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ತನ್ನ ಶಾಸಕರ ರಕ್ಷಣೆ ಮಾಡಿಕೊಳ್ಳಲು ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ಇನ್ನು ಗುಜರಾತ್​​ನಲ್ಲಿ ಕೆಲವೇ ದಿನಗಳಲ್ಲಿ ಬಜೆಟ್​ ಅಧಿವೇಶನ ಆರಂಭಗೊಳ್ಳಲಿರುವ ಕಾರಣ ಎಲ್ಲ ಶಾಸಕರು ಹಾಜರಿ ಅವಶ್ಯವಾಗಿದ್ದು, ಕಾಂಗ್ರೆಸ್​ ತನ್ನ ಶಾಸಕರನ್ನ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು ಎನ್ನಲಾಗುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا