Urdu   /   English   /   Nawayathi

ಮೃಗಾಲಯದಲ್ಲಿ ಆಯತಪ್ಪಿ ಹುಲಿ ಆವರಣಕ್ಕೆ ಬಿದ್ದ ವ್ಯಕ್ತಿ... ಮೃತದೇಹ ಹೊರ ತೆಗೆಯಲು ಹರಸಾಹಸ

share with us

ರಾಂಚಿ: 05 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ರಾಂಚಿ ಮೃಗಾಲಯ ಎಂದು ಕರೆಯಲ್ಪಡುವ ಭಗವಾನ್ ಬಿರ್ಸಾ ಜೈವಿಕ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬ ಹುಲಿ ಇದ್ದ ಜಾಗಕ್ಕೆ ಆಯತಪ್ಪಿ ಬಿದ್ದು ವ್ಯಾಘ್ರದ ದಾಳಿಗೆ ಬಲಿಯಾಗಿದ್ದಾನೆ. ಸ್ಥಳದಲ್ಲಿದ್ದವರ ಪ್ರಕಾರ, ವ್ಯಕ್ತಿಯೊಬ್ಬ ಹುಲಿ ಇದ್ದ ಆವರಣಕ್ಕೆ ಬಿದ್ದಿದ್ದಾನೆ, ಈ ವೇಳೆ ಅಲ್ಲೆ ಇದ್ದ ಹೆಣ್ಣು ಹುಲಿ ಆತನನ್ನ ಕೊಂದಿದೆ ಎಂದಿದ್ದಾರೆ. ವಿಷಯ ಗೊತ್ತಾದ ಕೂಡಲೇ ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಮೃತದೇಹವನ್ನು ಹುಲಿ ಆವರಣದಿಂದ ಹೊರ ತೆಗೆಯುವ ಪ್ರಯತ್ನ ನಡೆಯುತ್ತಿದ್ದು, ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا