Urdu   /   English   /   Nawayathi

ಪಕ್ಷ ಎಂಬುದು ಪ್ರತೀ ರಾಜಕಾರಣಿಗೂ ತಾಯಿ ಇದ್ದಂತೆ: ಡಿಸಿಎಂ ಕಾರಜೋಳ

share with us

ಚಿಕ್ಕಮಗಳೂರು: 28 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಯಾವುದೇ ಒಬ್ಬ ರಾಜಕಾರಣಿಗೆ ಪಕ್ಷ ಎಂಬುದು ತಾಯಿ ಇದ್ದಂತೆ, ಪಕ್ಷದ ನಿರ್ಣಯಕ್ಕಾಗಿ ಕಾಯುವುದು ನಮ್ಮ ಕರ್ತವ್ಯ ಆದ್ದರಿಂದ ಸಂಪುಟ ವಿಸ್ತರಣೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ, ಪಕ್ಷ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಪಕ್ಷಕ್ಕೆ ಹಾಗೂ ಪಕ್ಷದ ನಿರ್ಣಯಗಳಿಗೆ ಗೌರವ ಕೊಡದಿದ್ದರೆ ಸಮಾಜದಲ್ಲಿ ಬೆಳೆಯಲು ಸಾಧ್ಯವಿಲ್ಲ. ನಾವು ಯಾವಾಗಲೂ ಪಕ್ಷದ ನಿಲುವಿಗೆ ಬದ್ಧರಾಗಿರುತ್ತೇವೆ ಎಂದರು. ಇನ್ನು ಸಂಪುಟ ವಿಸ್ತರಣೆ ವಿಚಾರವಾಗಿ ನಾನು ಯಾವುದೇ ಗಾಳಿ ಸುದ್ದಿಗೆ ಕಿವಿ ಕೊಡುವುದಿಲ್ಲ. ಪಕ್ಷ ಅಂದಮೇಲೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ, ಮುಖ್ಯಮಂತ್ರಿ ಸ್ಥಾನಕ್ಕೆ ಸಹ ಬೇಡಿಕೆ ಇಡುವುದು ಸಹಜ, ಒಂದು ವೇಳೆ ಪಕ್ಷದ ವರಿಷ್ಠರು ಡಿಸಿಎಂ ಸ್ಥಾನ ಬಿಡಲು ಹೇಳಿದರೆ ಖಂಡಿತವಾಗಿಯೂ ಬಿಟ್ಟುಕೊಡುವೆ ಎಂದರು. ಸೋತವರಿಗೆ ಸ್ಥಾನಮಾನ ನೀಡುವುದು ಸಹ ಪಕ್ಷದ ವರಿಷ್ಠರಿಗೆ ಬಿಟ್ಟಿರುವ ವಿಚಾರ, ಯಡಿಯೂರಪ್ಪನವರಿಗೆ ಹೈಕಮಾಂಡ್​​ ಸಂಪೂರ್ಣ ಸ್ವಾತಂತ್ರ್ಯವನ್ನ ನೀಡಿದೆ. ಮುಖ್ಯಮಂತ್ರಿಗಳು ಹೈಕಮಾಂಡ್​​ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا