Urdu   /   English   /   Nawayathi

ನನ್ನ ಬಲಿದಾನ ಮಾಡ್ತಾನಂತಾ? ತಾಕತ್ ಇದ್ರೆ ಬರೋಕೆ ಹೇಳ್ರಿ ಅವನಿಗೆ: ಸುರೇಶ್ ಗುಡುಗು

share with us

ರಾಮನಗರ: 18 ಜನುವರಿ 2020 (ಫಿಕ್ರೋಖಬರ್ ಸುದ್ದಿ) ‘ನನ್ನ ಬಲಿದಾನ ಮಾಡುತ್ತೇನೆ ಎನ್ನುವವರು ಮೊದಲು ಅವರ ಬಲಿದಾನಕ್ಕೂ ಸಿದ್ಧರಿರಬೇಕು' ಎಂದು ಸಂಸದ ಡಿ.ಕೆ. ಸುರೇಶ್ ಅವರು ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ತಿರುಗೇಟು ನೀಡಿದರು. ಶನಿವಾರ ಪತ್ರಕರ್ತರ ಜತೆ‌ ಮಾತನಾಡಿ, ‘ಅವರದ್ದು ಒಂದು ರಾಜಕೀಯ ಪಕ್ಷ. ಆ ಪಕ್ಷದ ಹಿನ್ನೆಲೆ ಗಾಯಕ ಅವರು. ಯಾರೂ ನನ್ನನ್ನು ಏನೂ ಮಾಡೋಕೆ ಆಗೋದಿಲ್ಲ. ನನ್ನ ಬಲಿದಾನ ಮಾಡ್ತಾನಂತಾ? ಅವನಿಗೆ ತಾಕತ್ ಇದ್ರೆ ಬರೋಕೆ ಹೇಳ್ರಿ’ ಎಂದು ಸವಾಲು ಹಾಕಿದರು. ‘ದೇಶದಲ್ಲಿ ಎಲ್ಲರಿಗೂ ಬದುಕುವ ಸಮಾನ ಹಕ್ಕನ್ನು ಸಂವಿಧಾನ ನೀಡಿದೆ. ಎಲ್ಲ ಜಾತಿ- ಧರ್ಮದವರೂ ಇಲ್ಲಿದ್ದಾರೆ. ಇದು ಯಾರೋ ಒಬ್ಬರ ಸ್ವತ್ತಲ್ಲ’ ಎಂದು ಕಿಡಿಕಾರಿದರು. ‘ಬಿಜೆಪಿಯವರು ರಾಮನಗರದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರು ಬಾನಂದೂರು ಅಭಿವೃದ್ದಿಗೆಂದು ₹25 ಕೋಟಿ‌ ಬಿಡುಗಡೆ ಮಾಡಿತ್ತು. ಹೊಸ ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸಭೆ ಕರೆಯಬೇಕು’ ಎಂದು ಆಗ್ರಹಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا