Urdu   /   English   /   Nawayathi

ನಾವು ಭಾರತದಲ್ಲೇ ಹುಟ್ಟಿದವರು ಇಲ್ಲೇ ಸಾಯುತ್ತೇವೆ : ಮಹಮ್ಮದ್ ಮಸೂದ್

share with us

ಮಂಗಳೂರು: 14 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ವಿರುದ್ದ ದ.ಕ. ಮತ್ತು‌ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಜ.15ರಂದು ಅಡ್ಯಾರ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿಯ ಬಳಿಯಿರುವ ಶಹಾ ಗಾರ್ಡನ್ ಮೈದಾನದಲ್ಲಿ‌ ಬೃಹತ್ ಸಮಾವೇಶವನ್ನು ನಡೆಸಲಾಗುತ್ತಿದ್ದು, ನಾವು ಭಾರತದಲ್ಲೇ ಹುಟ್ಟಿದವರು ಇಲ್ಲೇ ಸಾಯುತ್ತೇವೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮಹಮ್ಮದ್ ಮಸೂದ್ ಹೇಳಿದರು. ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸೋಂನಲ್ಲಿ 15 ಲಕ್ಷ ಮಂದಿ ಹಿಂದೂಗಳಿಗೆ ಪೌರತ್ವ ನೀಡಲು‌ ಎನ್ಆರ್​ಸಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆದರೆ ಸಿಎಎ ಕಾಯ್ದೆಯ ಪ್ರಕಾರ ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಧರ್ಮಗಳಿಗೆ ಪೌರತ್ವ ನೀಡಲಾಗುತ್ತಿದೆ. ಇಲ್ಲಿನ ಮುಸ್ಲಿಮರಿಗೆ ಇದರಿಂದ ತೊಂದರೆಯಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ ಮುಸ್ಲಿಮರನ್ನು ಸಿಎಎ ಕಾಯ್ದೆಯಲ್ಲಿ ಯಾಕೆ ಹೊರಗಿರಿಸಲಾಗಿದೆ ಎಂದು ಪ್ರಶ್ನಿಸಿದರು. ಇನ್ನು ಹೀಗಾಗಿ ಕೇಂದ್ರ ಸರ್ಕಾರದ ಇಂತಹ ಜನವಿರೋಧಿ ನಡೆಯನ್ನು ಪ್ರಶ್ನಿಸಿ ‌ಬೃಹತ್ ಸಮಾವೇಶವನ್ನು ನಡೆಸಲಾಗುತ್ತಿದ್ದು, ಈ ಬೃಹತ್ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ದ.ಕ. ಹಾಗೂ ಉಡುಪಿ ಜಿಲ್ಲೆಯವರು ಭಾಗವಹಿಸಲಿದ್ದಾರೆ. ಆದರೆ ಕೇರಳ, ಕಾರವಾರ, ಗಂಗೊಳ್ಳಿ ಮುಂತಾದ ಕಡೆಗಳಿಂದ ನಾವೂ ಸಮಾವೇಶದಲ್ಲಿ ಭಾಗವಹಿಸಲಿದ್ದೇವೆ ಎಂದು ಹೇಳಿದರು. ಇನ್ನು ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا