Urdu   /   English   /   Nawayathi

ಬಸವಕಲ್ಯಾಣ ಬಳಿ ಹೆದ್ದಾರಿಯಲ್ಲೇ ಕಳಚಿದ ಬಸ್ಸಿನ ಗಾಲಿಗಳು!

share with us

ಬಸವಕಲ್ಯಾಣ: 09 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದರ ಹಿಂಬದಿ ಚಕ್ರಗಳು ದಿಢೀರ್​ ಕಳಚಿಬಿದ್ದ ಘಟನೆ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ-65ರ ಮೇಲಿರುವ ಸಸ್ತಾಪೂರ ಬಂಗ್ಲಾ ಬಳಿ ನಡೆದಿದೆ. ಬಸವಕಲ್ಯಾಣ ಘಟಕಕ್ಕೆ ಸೇರಿದ ಎನ್ಇಕೆಎಸ್ಆರ್​ಟಿಸಿ ಬಸ್​ ಅಳಂದ್ ತಾಲೂಕಿನ ವಿಕೆ ಸಲಗರದಿಂದ ಬಸವಕಲ್ಯಾಣ ಕಡೆ ಬರುವಾಗ ಈ ಘಟನೆ ಸಂಭವಿಸಿದೆ. ಹೆದ್ದಾರಿ ಮೇಲೆ ವೇಗವಾಗಿ ಸಂಚರಿಸುತ್ತಿದ್ದ ಬಸ್ಸಿನ ಮುಂದೆ ಕುರಿಯೊಂದು ಅಡ್ಡ ಬಂದಿತ್ತು. ಈ ಕುರಿ ರಕ್ಷಣೆಗೆಂದು ಚಾಲಕ ತಕ್ಷಣ ಬ್ರೇಕ್ ಹಾಕಿದ್ದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗ್ತಿದೆ. ವೇಗದಲ್ಲಿ ಸಂಚರಿಸುತ್ತಿದ್ದ ಬಸ್ಸಿನಿಂದ ಬೇರ್ಪಟ್ಟ ಹಿಂಬದಿಯ ನಾಲ್ಕು ಚಕ್ರಗಳು ರಸ್ತೆಯ ಬಲ ಭಾಗಕ್ಕೆ ಕಳಿಚಿಕೊಂಡು ಹೋಗಿದ್ದರೆ, ಬಸ್ಸು ಎಡಭಾಗಕ್ಕೆ ತೆರಳಿದೆ. ಇದರಿಂದ ಬಸ್​ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಯಾವುದೇ ಪ್ರಾಣಾಪಾಯ ಸಂಭವಿಸದೇ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಬಸವಕಲ್ಯಾಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا