Urdu   /   English   /   Nawayathi

ಗೋಲಿಬಾರ್​ಗೆ ಬಲಿಯಾದವರ ಕುಟುಂಬಸ್ಥರಿಗೆ ರಿಝ್ವಾನ್ ಅರ್ಷದ್​​​ರಿಂದ ಪರಿಹಾರ

share with us

ಮಂಗಳೂರು: 05 ಜನುವರಿ 2020 (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಡಿ.19 ರಂದು ಪೊಲೀಸರ ಗೋಲಿಬಾರ್​ಗೆ ಬಲಿಯಾದವರ ಮನೆಗೆ ಭೇಟಿಯಾದ ಬೆಂಗಳೂರು, ಶಿವಾಜಿ ನಗರ ಶಾಸಕ ರಿಝ್ವಾನ್ ಅರ್ಷದ್ ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ, ತಲಾ 2.50 ಲಕ್ಷ ರೂ. ಪರಿಹಾರ ನೀಡಿದರು. ಇಂದು ಬೆಳಗ್ಗೆ 12ರ ಸುಮಾರಿಗೆ ಕಂದಕ್​ನಲ್ಲಿರುವ ಜಲೀಲ್ ಎಂಬಾತನ ಮನೆಗೆ ಭೇಟಿ ನೀಡಿದ ಅವರು ಬಳಿಕ ಅವರು ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕುದ್ರೋಳಿಯ ನೌಶೀನ್ ಮನೆಗೆ ಭೇಟಿ ನೀಡಿ, ಸಾಂತ್ವನ ತಿಳಿಸಿದರು. ಈ ಸಂದರ್ಭ ಎರಡೂ ಕುಟುಂಬಸ್ಥರಿಗೆ ಪರಿಹಾರವಾಗಿ ತಲಾ ಎರಡೂವರೆ ಲಕ್ಷ ರೂ. ಪರಿಹಾರ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್​ನ ಅಧ್ಯಕ್ಷ ಮಿಥುನ್ ರೈ, ಮಂಗಳೂರು ಮನಪಾ ಸದಸ್ಯ ಎ.ಸಿ.ವಿನಯರಾಜ್, ಲತೀಫ್ ಕಂದಕ್ ಮತ್ತಿತರರು ಜೊತೆಯಲ್ಲಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا