Urdu   /   English   /   Nawayathi

ಉದ್ಧವ್​ ಠಾಕ್ರೆ ಟೀಕಿಸಿ ಪೋಸ್ಟ್​: ಸರ್ಕಾರಿ ಅಧಿಕಾರಿ ಮೇಲೆ ಇಂಕ್​ ಸುರಿದು ಶಿವಸೇನಾ ಕಾರ್ಯಕರ್ತೆ ಧಮ್ಕಿ!

share with us

ಮಹಾರಾಷ್ಟ್ರ: 31 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸಾಮಾಜಿಕ ಜಾಲತಾಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯನ್ನು ಟೀಕೆ ಮಾಡಿ ಪೋಸ್ಟ್​ ಮಾಡಿದ್ದಕ್ಕೆ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಶಿವಸೇನಾ ಮಹಿಳಾ ಕಾರ್ಯಕರ್ತರೊಬ್ಬರು ಶಾಯಿ (ಇಂಕ್​) ಸುರಿದಿರುವ ಘಟನೆ ಬೀಡ್​ ಜಿಲ್ಲೆಯಲ್ಲಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲೇ ಅಧಿಕಾರಿ ಮೇಲೆ ಶಿವಸೇನಾ ಕಾರ್ಯಕರ್ತೆ ಇಂಕ್​ ಸುರಿದು ಆವಾಜ್​ ಹಾಕುತ್ತಿರುವ ವಿಡಿಯೋ ವೈರಲ್​ ಆಗಿದೆ. ಸಿಎಎ ವಿರುದ್ಧ ಜಾಮಿಯಾ ಮಿಲಿಯಾ ಘಟನೆಯನ್ನು ಜಲಿಯನ್ ವಾಲಾ ಬಾಗ್​ ದುರಂತದ ಜೊತೆ ಸಿಎಂ ಹೋಲಿಕೆ ಮಾಡಿರುವುದು ತಪ್ಪು ಎಂದು ವಡಾಲಾ ನಿವಾಸಿ ಹಿರಮಣಿ ವಿಜೇಂದ್ರ ತಿವಾರಿ ಎಂಬವರು ಡಿ.19 ರಂದು ಸಿಎಂ ಉದ್ಧವ್​ ಠಾಕ್ರೆ ವಿರುದ್ಧ 'ಆಕ್ಷೇಪಾರ್ಹ ಪೋಸ್ಟ್'​ ಮಾಡಿದ್ದಕ್ಕೆ ಶಿವಸೇನಾ ಕಾರ್ಯಕರ್ತರು ಥಳಿಸಿ, ಆತನ ತಲೆ ಬೋಳಿಸಿರುವ ಪ್ರಕರಣ ನಡೆದಿತ್ತು. ಈ ಸಂಬಂಧ ಐದು ಜನರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا