Urdu   /   English   /   Nawayathi

ನಿರಾಶ್ರಿತ ಕೇಂದ್ರಗಳಿಗೆ ದಿಢೀರ್​ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

share with us

ಲಖನೌ(ಉತ್ತರ ಪ್ರದೇಶ): 28 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​​ ತಡರಾತ್ರಿ ದಿಢೀರ್​ ಆಗಿ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಲಕ್ಷ್ಮಣ್​ ಮೇಳ ಮೈದಾನ, ದಲಿಗಂಜ್​​ ಮತ್ತು ಕಿಂಗ್​ ಜಾರ್ಜ್​​ ವೈದ್ಯಕೀಯ ವಿಶ್ವವಿದ್ಯಾಲಯದ ಮೂರು ಆಶ್ರಯ ಮನೆಗಳಿಗೆ ಅಚ್ಚರಿ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಅಲ್ಲಿ ವಾಸವಾಗಿರುವ ಜನರಿಗೆ ಒದಗಿಸಲಾಗುತ್ತಿರುವ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಅಲ್ಲಿ ವಾಸವಿದ್ದ ಜನರ ಜೊತೆ ಸಂವಹನ ನಡೆಸಿ ಕುಂದುಕೊರತೆ ಕುರಿತು ಮಾಹಿತಿ ಪಡೆದುಕೊಂಡರು. ಆದಿತ್ಯನಾಥ್​ ಅವರೊಂದಿಗೆ ಜನಸಂಪನ್ಮೂಲ ಸಚಿವ ಮಹೇಂದ್ರ ನಾಥ್​ ಸಿಂಗ್​,ನಗರಾಭಿವೃದ್ಧಿ ಸಚಿವ ಅಶುತೋಷ್​ ಟಂಡನ್​, ಜಿಲ್ಲಾಧಿಕಾರಿ ಅಭಿಷೇಕ್​ ಪ್ರಕಾಶ್​, ಎಸ್​ಎಸ್​ಪಿ ಕಲಾನಿಧಿ ನೈತಾನಿ ಮತ್ತು ಪುರಸಭೆ ಆಯುಕ್ತ ಇಂದ್ರಮಣಿ ತ್ರಿಪಾಠಿ ಉಪಸ್ಥಿತರಿದ್ದರು. ಇದೇ ವೇಳೆ ಆಶ್ರಯ ಮನೆಗಳಲ್ಲಿ ವಾಸವಾದವರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ, ಬಿಸಿ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا