Urdu   /   English   /   Nawayathi

ಬಸ್​ ಪ್ರಯಾಣಿಕರನ್ನು ಕಾಪಾಡಿ ಪ್ರಾಣಬಿಟ್ಟ ‘ಮಾರುತಿ’!

share with us

ತೆಲಂಗಾಣ: 18 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಚಲಿಸುತ್ತಿದ್ದ ಆರ್​ಟಿಸಿ ಬಸ್​ವೊಂದರ ಬ್ರೇಕ್​ ಫೇಲಾದಾಗ ಪ್ರಯಾಣಿಕರನ್ನು ರಕ್ಷಿಸಿ ಚಾಲಕ ಪ್ರಾಣಬಿಟ್ಟಿರುವ ಘಟನೆ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ ನಡೆದಿದೆ. ಹೈದರಾಬಾದ್​ನಿಂದ ಬೋಧನ್​ಗೆ ತೆರಳುತ್ತಿದ್ದ ಆರ್​ಟಿಸಿ ಸೂಪರ್​ ಲಗ್ಜುರಿ ಬಸ್​ ಡಿಚ್​ಪಲ್ಲಿ ಗ್ರಾಮದ ಸಮೀಪ ಬ್ರೇಕ್​ ಫೇಲ್​ ಆಗಿತ್ತು. ಚಲಿಸುತ್ತಿದ್ದ ವೇಳೆ ಬಸ್​ ಬ್ರೇಕ್​ ಫೇಲ್​ ಆಗಿದ್ದರಿಂದ ವಾಹನವನ್ನು ನಿಲ್ಲಿಸಲು ಚಾಲಕ ಮಾರುತಿ ರಸ್ತೆ ಪಕ್ಕದಲ್ಲಿರುವ ಕಬ್ಬಿಣ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಬಸ್​ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತ್ತು. ಆದ್ರೆ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆದಲ್ಲೇ ಪ್ರಾಣ ಬಿಟ್ಟಿದ್ದಾರೆ. ನಮ್ಮೆಲ್ಲರ ಪ್ರಾಣವನ್ನು ಕಾಪಾಡಿ ಚಾಲಕ ಪ್ರಾಣಬಿಟ್ಟನೆಂದು ಪ್ರಯಾಣಿಕರು ತೀವ್ರ ದುಃಖಿತರಾದ್ರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا