Urdu   /   English   /   Nawayathi

ವ್ಯಕ್ತಿ ಕೊಲೆಗೈದು ಮನೆ ದರೋಡೆ ಮಾಡಿದ್ದ ಮೂವರು ಆರೋಪಿಗಳ ಬಂಧನ

share with us

ತುಮಕೂರು: 15 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮನೆಗೆ ನುಗ್ಗಿ ವ್ಯಕ್ತಿಯನ್ನು ಕೊಲೆ ಮಾಡಿ, ಮನೆ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧುಗಿರಿ ತಾಲೂಕಿನ ಮರಬಹಳ್ಳಿ ಗ್ರಾಮದ ಚೌಡಪ್ಪ ಎಂಬುವರರ ಮನೆಗೆ ಡಿ.10 ರಂದು ನುಗ್ಗಿದ್ದ ಮೂವರು ದರೋಡೆ ಕೋರರು ಚೌಡಪ್ಪ ಅವರನ್ನು ಕೊಲೆಗೈದು ಹನುಮಂತರಾಯ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಸುರೇಶ್, ವಿಜಯಕುಮಾರ್, ಲೋಕೇಶ್ ಬಂಧಿತ ಆರೋಪಿಗಳಾಗಿದ್ದು ಮಧುಗಿರಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಮರಬಹಳ್ಳಿ ಗ್ರಾಮದಲ್ಲಿ ಚೌಡಪ್ಪ ಅಂಗಡಿ ಇಟ್ಟುಕೊಂಡಿದ್ದು, ಪಕ್ಕದಲ್ಲೇ ಇದ್ದ ಮನೆಯಲ್ಲಿ ವಾಸವಾಗಿದ್ದರು. ಈ ಮೂವರು ಆರೋಪಿಗಳು ಅಂದು ರಾತ್ರಿ ಮನೆಯಲ್ಲಿಯೇ ಮದ್ಯ ಸೇವನೆ ಮಾಡಿ ಚೌಡಪ್ಪ ಜೊತೆ ತಗಾದೆ ತೆಗೆದಿದ್ದರು. ಮಾತಿಗೆ ಮಾತು ಬೆಳೆದು ಚೌಡಪ್ಪನ ಬಳಿ ಇದ್ದ ಹಣವನ್ನು ಕಸಿದುಕೊಂಡಿದ್ದಾರೆ. ಅಲ್ಲದೇ ಹೋಗುವಾಗ ಅವರನ್ನು ಕೊಲೆ ಮಾಡಿದ್ದಾರೆ. ಆಗ ಅಡ್ಡ ಬಂದಿದ್ದ ಹನುಮಂತರಾಯ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದರು. ವ್ಯವಸ್ಥಿತವಾಗಿ ದರೋಡೆ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا