Urdu   /   English   /   Nawayathi

'ಕೈಲಾಸ ರಾಷ್ಟ್ರಕ್ಕೆ ವೀಸಾ ಪಡೆಯೋದು ಹೇಗೆ'..? ಟ್ವಿಟರ್​​​​ನಲ್ಲಿ ಆರ್​.ಅಶ್ವಿನ್ ವ್ಯಂಗ್ಯ

share with us

ಹೈದರಾಬಾದ್: 04 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸದ್ಯ ಹೊಸ ರಾಷ್ಟ್ರ ಸ್ಥಾಪನೆ ಮಾಡಿರುವುದು ಭಾರಿ ಸುದ್ದಿ ಮಾಡುತ್ತಿದೆ. ಇದೇ ವಿಚಾರದ ಬಗ್ಗೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್​ ಟ್ವೀಟ್ ಒಂದನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಸ್ವಾಮಿ, ಈಕ್ವೆಡಾರ್​ನಲ್ಲಿ ಖರೀದಿಸಿರುವ ದ್ವೀಪಕ್ಕೆ ಕೈಲಾಸ ಎಂದು ನಾಮಕರಣ ಮಾಡಿ, ಅದಕ್ಕೆ ಸ್ವಂತ ಧ್ವಜ, ಲಾಂಛನ ಪಾಸ್ಪೋರ್ಟ್ ಕೂಡ ಸಿದ್ದಪಡಿಸಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕಾದಲ್ಲಿ 'ಕೈಲಾಸ'ವನ್ನೇ ನಿರ್ಮಿಸಿದ ನಿತ್ಯಾನಂದ!

ಕೈಲಾಸಕ್ಕೆ ವೀಸಾ ಪಡೆಯುವ ವಿಧಾನಗಳು ಏನು..? ಅಥವಾ ಅದು ಬರುತ್ತಿದೆಯೇ..? ಎಂದು ಟ್ವಿಟರ್​ನಲ್ಲಿ ಪ್ರಶ್ನೆ ಮಾಡಿರುವ ಅಶ್ವಿನ್ ಕೊನೆಯಲ್ಲಿ #Kailaasa ಎಂದು ಬರೆದಿದ್ದಾರೆ. ಗುಜರಾತ್ ಪೊಲೀಸರು ನಿತ್ಯಾನಂದನ ಬಂಧನಕ್ಕೆ ಬಲೆ ಬೀಸಿದ್ದು, ಇದರ ನಡುವೆ ಆತನ ಹೊಸ ರಾಷ್ಟ್ರದ ಬಗ್ಗೆ ಸುದ್ದಿ ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ ಒಂದು ವರ್ಷದ ಹಿಂದೆಯೇ ನಿತ್ಯಾನಂದ ಭಾರತ ತೊರೆದಿದ್ದ ಎನ್ನಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا