Urdu   /   English   /   Nawayathi

ಆಕಸ್ಮಿಕ ಬೆಂಕಿಗೆ ಮನೆ ಭಸ್ಮ

share with us

ಜೊಯಿಡಾ: 01 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಬಾಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಂದಳೆಯಲ್ಲಿ ಶುಕ್ರವಾರ ತಡರಾತ್ರಿ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಭಸ್ಮವಾಗಿದೆ. ಹಾನಿಗೊಳಗಾದ ಮನೆಯ ಗುರುನಾಥ ವಿಷ್ಣು ಗಾವಡೆ ಕುಟುಂಬದವರು ಬೇರೆಡೆಗೆ ತೆರಳಿದ್ದ ವೇಳೆ ಬೆಂಕಿ ತಗುಲಿದೆ. ಸುದ್ದಿ ತಿಳಿಯುತ್ತಿದ್ದಂತೆ ಊರ ಜನರೆಲ್ಲ ಸೇರಿ ಬೆಂಕಿ ಆರಿಸುವ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮನೆಯಲ್ಲಿದ್ದ ಟಿ.ವಿ., 20 ಕ್ವಿಂಟಾಲ್ ಭತ್ತ, 4 ಕ್ವಿಂ. ಅಡಕೆ, 4 ತೊಲ ಬಂಗಾರ, 1.40 ಲಕ್ಷ ನಗದು, ಬಟ್ಟೆ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ಸುಟ್ಟಿವೆ. ಹಂಚು ಮತ್ತು ಕಟ್ಟಿಗೆಯ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಒಟ್ಟು 35 ಲಕ್ಷ ರೂ.ಗಳಿಗೂ ಹೆಚ್ಚು ಹಾನಿಯಾಗಿದೆ ಎಂದು ತಿಳಿದು ಬಂದಿದೆ. ರಾಮನಗರ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಾಗಿದೇಯೋ ಅಥವಾ ಬೇರೆ ಕಾರಣವೋ ಎಂದು ತಿಳಿದು ಬರಬೇಕಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا