Urdu   /   English   /   Nawayathi

ಚಿನ್ನಾಭರಣವಿದ್ದ ಬ್ಯಾಗ್​​ ಕದ್ದು ಎಸ್ಕೇಪ್​​​​... ಸಿನಿಮೀಯ ರೀತಿಯಲ್ಲಿ ಬಂಧಿಸಿದ ರೈಲ್ವೆ ಪೊಲೀಸರು!

share with us

ಕಾರವಾರ: 28 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ರೈಲಿನಲ್ಲಿ ಇಬ್ಬರು ಮಹಿಳೆಯರ ಹಣ ಹಾಗೂ ಚಿನ್ನಾಭರಣವಿದ್ದ ಬ್ಯಾಗ್ ಕದ್ದೊಯ್ಯುತ್ತಿದ್ದ ಮೂವರು ಆರೋಪಿಗಳನ್ನು ರೈಲ್ವೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಮಂಗಳೂರಿನ ಚೈತ್ರಾ ಶೆಟ್ಟಿ ಹಾಗೂ ಕಾಶ್ಮೀರ ಮೂಲದ ಅನಿತಾ ಶಾಲಿನ್ ಎಂಬುವವರು ಮತ್ಸ್ಯಗಂಧ ರೈಲಿನಲ್ಲಿ ಕುಟುಂಬದ ಜೊತೆ ಪ್ರಯಾಣಿಸುವ ವೇಳೆ ಮುರುಡೇಶ್ವರ ರೈಲ್ವೆ ನಿಲ್ದಾಣದ ಬಳಿ ಮೂವರು ಕಳ್ಳರು ಬ್ಯಾಗ್ ಕದ್ದು ಪರಾರಿಯಾಗಿದ್ದರು.‌ ಇದು ಗಮನಕ್ಕೆ ಬಂದು ಪ್ರಯಾಣಿಕರು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದರು. ಚೈತ್ರಾ ಶೆಟ್ಟಿಯ ಬ್ಯಾಗ್​​ನಲ್ಲಿ ಮಂಗಳಸೂತ್ರ, ಉಂಗುರ, ಕಿವಿ ಓಲೆ ಸೇರಿದಂತೆ ಸುಮಾರು 4 ಲಕ್ಷ ರೂ. ಮೌಲ್ಯದ ಆಭರಣ ಮತ್ತು ಅನಿತಾ ಅವರ 500 ರೂ. ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಪೊಲೀಸರು ಆರೋಪಿಗಳು ಬಸ್ ಮೂಲಕ ಕಾರವಾರ ಕಡೆ ತೆರಳುತ್ತಿರುವುದನ್ನು ಪತ್ತೆ ಹಚ್ಚಿದರು. ಅದರಂತೆ ಕಾರವಾರದ ಬೈತಖೋಲ್ ಬಳಿ ಸಿನಿಮೀಯ ರೀತಿಯಲ್ಲಿ ಬಸ್​ಗೆ ಅಡ್ಡ ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದು, ವಿಚಾರಣೆ ಮುಂದುವರಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا