Urdu   /   English   /   Nawayathi

ಜನರ ಮೇಲೆ ಒತ್ತಡ ಹಾಕಿ ಸಾಲ ವಸೂಲಿಗಿಳಿದರೆ ಕ್ರಿಮಿನಲ್ ಕೇಸ್: ಸುಳ್ಯ ತಹಶೀಲ್ದಾರ್​ ಎಚ್ಚರಿಕೆ

share with us

ಸುಳ್ಯ: 21 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಜನರ ಮೇಲೆ ಒತ್ತಡ ಹೇರುವ ಮೂಲಕ ಸಾಲ ವಸೂಲಾತಿಗೆ ಮುಂದಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದೇ ರೀತಿ ಮುಂದುವರೆದರೆ ಫೈನಾನ್ಸ್​​ನವರ ಮೇಲೆ ಕ್ರಿಮಿನಲ್ ಕೇಸ್​​ ಹಾಕುತ್ತೇವೆಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಹಶೀಲ್ದಾರ್​​ ಕುಂಞಿ ಅಹಮ್ಮದ್ ಎಚ್ಚರಿಸಿದರು. ಬುಧವಾರ ತಮ್ಮ ಕಚೇರಿಗೆ ತಾಲೂಕಿನ ಫೈನಾನ್ಸ್ ಕಂಪನಿ ಪ್ರತಿನಿಧಿಗಳನ್ನು ಕರೆಸಿ ಮಾತನಾಡಿದ ತಹಶೀಲ್ದಾರ್, ನಿಮ್ಮ ಹಣಕಾಸು ವ್ಯವಹಾರ ಮತ್ತು ಕೊಟ್ಟ ಸಾಲಕ್ಕೆ ಎಷ್ಟು ಬಡ್ಡಿ ವಸೂಲಿ ಮಾಡುತ್ತೀರಿ ಎಂಬುದರ ಮಾಹಿತಿ, ಆರ್‌ಬಿಐನಿಂದ ಪಡೆದ ಪರವಾನಿಗೆ ಪತ್ರ ಹಾಗೂ ಅದರ ನಿಯಮದಂತೆ ವ್ಯವಹರಿಸುತ್ತಿರುವುದಕ್ಕೆ ಸೂಕ್ತ ದಾಖಲೆಗಳನ್ನು ಕೂಡಲೇ ನೀಡಬೇಕು. ಅದನ್ನು ನಾವು ಪರಿಶೀಲಿಸುತ್ತೇವೆ. ನೀವು ನಿಯಮ ಮೀರಿ ವ್ಯವಹಾರ ನಡೆಸಿದ್ದು ಮತ್ತು ಜನರ ಮೇಲೆ ಒತ್ತಡ ಹೇರಿ ಸಾಲ ವಸೂಲಾತಿ ಮಾಡುತ್ತಿರುವುದು ಸಾಬೀತಾದರೆ ನಾವು ಸುಮ್ಮನೆ ಕೂರುವುದಿಲ್ಲ. ಅಂತವರ ವಿರುದ್ಧ ಕ್ರಿಮಿನಲ್ ಕೇಸ್​​ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಫೈನಾನ್ಸ್ ಪ್ರತಿನಿಧಿಗಳು ಕೂಡ ತಮ್ಮ ಸಮಸ್ಯೆಗಳನ್ನು ತಹಶೀಲ್ದಾರರ ಮುಂದೆ ಹೇಳಿಕೊಂಡ ಪ್ರಸಂಗವೂ ನಡೆಯಿತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا