Urdu   /   English   /   Nawayathi

ಕರ್ತವ್ಯ ಲೋಪ: ಉಡುಪಿ ನಗರ ಎಸ್ಸೈ ಅನಂತಪದ್ಮನಾಭ ಅಮಾನತು

share with us

ಉಡುಪಿ: 12 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕರ್ತವ್ಯಲೋಪದ ಆರೋಪದ ಮೇಲೆ ಉಡುಪಿ ನಗರ ಠಾಣೆ ಪೋಲೀಸ್ ಉಪನಿರೀಕ್ಷಕ (ಎಸ್.ಐ) ಅನಂತಪದ್ಮನಾಭ ಹಾಗೂ ಓರ್ವ ಹೆಡ್ ಕಾಸ್ಟೇಬಲ್  ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೋಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಆದೇಶಿಸಿದ್ದಾರೆ. ನವೆಂಬರ್ 2 ರಂದು ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಗೆಳತಿಯರೊಡನೆ ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆಗೆ ಸಮ್ಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪ ಅನಂತಪದ್ಮನಾಭ ಅವರ ಮೇಲಿದೆ.

ಘಟನೆ ವಿವರ

ಸ್ನೇಹಿತರಾಗಿದ್ದ ಅಶೀಶ್ ಕಾನು, ತಾಹಿಮ್ ಹಾಗೂ ಶಿವಾನಿ ಎಂಬುವವರು ನವೆಂಬರ್ 2 ರಂದು ರಾತ್ರಿ ಎಂಟರ ಸಮಯದಲ್ಲಿ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಸುನೀಲ್ ಪೂಜಾರಿ, ರಾಕೇಶ್ ಸುವರ್ಣ ಹಾಗೂ ಇತರರು ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನವೆಂಬರ್ ಐದರಂದು ಉಡುಪಿ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ಆ ಪ್ರಕರಣದಲ್ಲಿ ಕೃಷ್ಣಾನಂದ ಎನ್ನುವವರು ಪ್ರತಿದೂರನ್ನೂ ಸಲ್ಲಿಸಿದ್ದರು.  ಈ ಕುರಿತಂತೆ ಕರ್ತವ್ಯ ಲೋಪ ಎಸಗಿದ್ದ ಎಸ್ಸೈಅನಂತಪದ್ಮ್ನಾಭ ಹಾಗೂ ಹೆಡ್ ಕಾನ್ಸ್ಟೇಬಲ್ ಅವರುಗಳನ್ನು ಇದೀಗ ಅಮಾನತು ಮಾಡಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا