Urdu   /   English   /   Nawayathi

ವೈದ್ಯರ ಮೇಲಿನ ಗೂಂಡಾ ವರ್ತನೆಗೆ ತೀವ್ರ ಖಂಡನೆ

share with us

ಕಾರವಾರ: 09 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಬೆಂಗಳೂರಿನಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆಯ ವೈದ್ಯರ ಮೇಲೆ ಕನ್ನಡ ಸಂಘಟನೆ ಪದಾಧಿಕಾರಿಗಳು ಗೂಂಡಾ ವರ್ತನೆ ತೋರಿರುವುದನ್ನು ಭಾರತೀಯ ವೈದ್ಯಕೀಯ ಸಂಘದ ಕಾರವಾರ ಘಟಕದ ಪದಾಧಿಕಾರಿಗಳು ಖಂಡಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರನ್ನು ಶುಕ್ರವಾರ ಭೇಟಿಯಾದ ಸಂಘದ ಪದಾಧಿಕಾರಿಗಳು, ಗೂಂಡಾ ವರ್ತನೆ ತೋರಿದ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಮನವಿ ಮಾಡಿದರು. ಡಾ. ನಿತಿನ್ ಪಿಕಳೆ, ಡಾ. ಕೀರ್ತಿ ನಾಯಕ, ಡಾ. ಸುರೇಶ ಭಟ್ ಈ ಸಂದರ್ಭದಲ್ಲಿದ್ದರು.

ಒಪಿಡಿ ಬಂದಿಲ್ಲ: ಜಿಲ್ಲೆಯ ಎಲ್ಲ ಕಡೆ ಒಪಿಡಿಗಳು ತೆರೆದಿದ್ದವು. ಜನರಿಗೆ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.

ವಿದ್ಯಾರ್ಥಿಗಳ ಮೆರವಣಿಗೆ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಸರ್ಕಾರಿ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا