Urdu   /   English   /   Nawayathi

ಕೌದಳ್ಳಿಯಲ್ಲಿ ಶ್ರೀಗಂಧದ ಮರಗಳ್ಳತನ: ತಡೆಯಲು ಹೋದ ಶಿಕ್ಷಕನಿಗೆ ಮಚ್ಚಿನೇಟು!

share with us

ಚಾಮರಾಜನಗರ: 06 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಶ್ರೀಗಂಧದ ಮರಗಳನ್ನು ಕಡಿಯುವುದನ್ನು ತಡೆಯಲು ಹೋದ ಶಿಕ್ಷಕನಿಗೆ ಕಳ್ಳರು ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ. ಶಿಕ್ಷಕ ಜಬೀವುಲ್ಲಾ ಹಲ್ಲೆಗೊಳಗಾದ ಶಿಕ್ಷಕರು. ಮನೆ ಮುಂದೆ ಬೆಳೆಸಿದ್ದ ಗಂಧದ ಮರವನ್ನು ರಾತ್ರಿ ವೇಳೆ ಕಡಿಯುತ್ತಿರುವುದನ್ನು ತಡೆಯಲು ಹೋದ ವೇಳೆ ಮಚ್ಚಿನಿಂದ ಜಬೀವುಲ್ಲಾಗೆ ಹಲ್ಲೆ ನಡೆಸಿ‌ ಪರಾರಿಯಾಗಿದ್ದಾರೆ. ಕೆಲವು ದಿ‌ನಗಳ ಹಿಂದೆಯಷ್ಟೇ ಶ್ರೀಗಂಧದ ಮರದ ಖರೀದಿಗಾಗಿ ಇಬ್ಬರು ಅಪರಿಚಿತರು ಬಂದಿದ್ದ ವೇಳೆ ಜಬೀವುಲ್ಲಾ ನಿರಾಕರಿಸಿದ್ದರು ಎನ್ನಲಾಗಿದೆ.ಇನ್ನು ಅವರೇ ಈ ಕೃತ್ಯ ಮಾಡಿದ್ದಾರೆಂದು ಜಬೀವುಲ್ಲಾ ಆರೋಪಿಸಿದ್ದಾರೆ‌. ಸದ್ಯ ರಾಮಾಪುರ ಪೊಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا