Urdu   /   English   /   Nawayathi

ಅಮಾನವೀಯ..! ಬೈಕ್​ ಸವಾರನನ್ನು ಲೂಟಿ ಮಾಡಿ ಬೆಂಕಿಯಿಟ್ಟ ಖದೀಮರು

share with us

ಬೆಳಗಾವಿ (ಅಥಣಿ): 31 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ ಅಥಣಿ ತಾಲೂಕಿನ ಸರಿಸುಮಾರು 8 ಕಿಲೋಮೀಟರ್ ದೂರ ಅಂತರದಲ್ಲಿ ಕಟಗೇರಿ ಗ್ರಾಮದ ಸಮೀಪ ದರೋಡೆಕೋರರು ಅಟ್ಟಹಾಸ ಮೆರೆದಿದ್ದಾರೆ. ಬೈಕ್ ಸವಾರನನ್ನು ಅಡ್ಡಗಟ್ಟಿ ಹಣ, ಚಿನ್ನಾಭರಣ ದೋಚಿ, ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

robbed the bike rider in Athani

ಬೈಕ್ ಸವಾರ ಮಾರುತಿ ಭಜಂತ್ರಿ

ಮಾರುತಿ ಭಜಂತ್ರಿ ಎಂಬವರು ಅಥಣಿ ಪಟ್ಟಣದಿಂದ ಸ್ವಗ್ರಾಮಕ್ಕೆ ಸಾವಳಗಿಗೆ ಹಿಂದಿರುಗುವಾಗ ನಾಲ್ಕು ಜನ ದರೋಡೆಕೋರರು ಕಾರಿನಲ್ಲಿ ಬಂದು ಬೈಕಿಗೆ ಅಡ್ಡಗಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಪೆಟ್ರೋಲ್ ಸುರಿದು ಭಯ ಪಡಿಸಿ, ಹಣ ಬಂಗಾರ ಕಿತ್ತುಕೊಂಡು ಬೆಂಕಿಯಿಟ್ಟು ಪರಾರಿಯಾಗಿದ್ದಾರೆ. ಬೆಂಕಿಯಲ್ಲಿ ಸುಡುತ್ತಿದ್ದ ಬೈಕ್​ ಸವಾರನನ್ನು ಕಂಡ ಕಟಗೇರಿ ಗ್ರಾಮಸ್ಥರು ತಕ್ಷಣ ಬೆಂಕಿ ನಂದಿಸಿ, ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಗಾಯಾಳುವನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಿರಜ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಥಣಿ ಪಿಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಾರುತಿ ಭಜಂತ್ರಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಥಣಿ ಪೊಲೀಸರು ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا