Urdu   /   English   /   Nawayathi

ನಾನೇ ಸಾಯ್ತೇನೆ, ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ: ಮೃತ ಕಮಲೇಶ್​ ತಿವಾರಿ ಪತ್ನಿ

share with us

ಲಕ್ನೋ(ಉತ್ತರ ಪ್ರದೇಶ): 19 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿಯನ್ನು ನಿನ್ನೆ ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಈ ಅಮಾನುಷ ಹತ್ಯೆ ಖಂಡಿಸಿ ತಿವಾರಿ ಪತ್ನಿ ಕಿರಣ್​ ನಾನೇ ಸಾಯುತ್ತೇನೆ ಎಂದು ಗೋಗರೆದಿದ್ದಾರೆ. ಕಳೆದ ಶುಕ್ರವಾರ ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿಯನ್ನು ಅವರ ಕಚೇರಿಯಲ್ಲಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಬಳಿಕ ಅವರ ಮೃತದೇಹವನ್ನು ಮಹ್ಮುದಾಬಾದ್​ನ ಅವರ ನಿವಾಸಕ್ಕೆ ಸಾಗಿಸಲಾಗಿತ್ತು.

kamlesh tiwari

ಹತ್ಯೆಯಾದ ಕಮಲೇಶ್​ ತಿವಾರಿ

ತಮ್ಮ ಪತಿಯ ಸಾವಿನಿಂದ ನೊಂದಿರುವ ತಿವಾರಿ ಪತ್ನಿ ಕಿರಣ್​, ಈ ಕೂಡಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸ್ಥಳಕ್ಕೆ ಬರಬೇಕು. ಆವರೆಗೂ ನಾನು ಪತಿಯ ಶವ ಎತ್ತಲು ಅವಕಾಶ ನೀಡಲಾರೆ. ನಾನೇ ಸಾಯುತ್ತೇನೆ. ನಮ್ಮ ಕುಟುಂಬಕ್ಕೆ ರಕ್ಷಣೆಯಿಲ್ಲ. ಸರ್ಕಾರ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ನನ್ನ ಪತಿಗೆ ಈ ಮೊದಲೇ ಜೀವ ಬೆದರಿಕೆ ಇತ್ತು. ಹಲವು ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಈಗಾಗಲೇ ನಾವು ಪೊಲೀಸರಿಗೆ ತಿಳಿಸಿದ್ದೇವೆ. ಆದರೆ ಆಡಳಿತ ವರ್ಗ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಿಂದೂ ಮಹಾಸಭಾ ನಾಯಕನ ಗುಂಡಿಟ್ಟು ಹತ್ಯೆ

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا