Urdu   /   English   /   Nawayathi

ರಸ್ತೆ ದುರಸ್ತಿಗಾಗಿ ಯುವಕನಿಂದ ಮೌನ ಪ್ರತಿಭಟನೆ: ಹೋರಾಟಕ್ಕೆ ಸಾಥ್​​ ಕೊಟ್ಟ ಗೆಳೆಯರು

share with us

ಮಂಗಳೂರು: 13 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ನಗರದ ನಂತೂರು ವೃತ್ತದಲ್ಲಿ ರಸ್ತೆ ದುರಸ್ತಿಗಾಗಿ ಯುವಕನೋರ್ವ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ‌ ನಡೆಸಿದ್ದು, ಈ ಪ್ರತಿಭಟನೆಗೆ ಅವರ ನಾಲ್ವರು ಗೆಳೆಯರು ಸಹ ಸಾಥ್ ನೀಡಿದ್ದಾರೆ. ಹದಗೆಟ್ಟ ನಂತೂರು ರಸ್ತೆಯಿಂದ ದಿನವೂ ಸಾಕಷ್ಟು ಅಪಘಾತಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳು ಯಾವುದೇ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ ಎಂದು ಅರ್ಜುನ್ ಮಸ್ಕರನೇಸ್ ಎಂಬುವರು ಇಂದು ಮೌನ ಪ್ರತಿಭಟನೆ ನಡೆಸಿದರು. ಇವರಿಗೆ ಗೆಳೆಯರಾದ ರೂಪನ್ ಫೆರ್ನಾಂಡೀಸ್, ಆ್ಯಸ್ಲೇ, ಅಜೋಯ್ ಡಿಸಿಲ್ವಾ ಸೇರಿದಂತೆ ನಾಲ್ವರು ಗೆಳೆಯರು ಸಾಥ್ ನೀಡಿದ್ದಾರೆ. ಈ ಕುರಿತಂತೆ ಅರ್ಜುನ್ ಮಸ್ಕರೇನಸ್ ಮಾತನಾಡಿ, ಉತ್ತಮವಾದ ರಸ್ತೆಯ ಅಗತ್ಯವಿದೆ. ಅದಕ್ಕಾಗಿ ಈ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಈ ಪ್ರತಿಭಟನೆಯನ್ನು ಗಮನಿಸಿ ಸಂಬಂಧಪಟ್ಟವರು ತಕ್ಷಣ ಬಂದು ಭರವಸೆ ನೀಡಬೇಕು ಎಂದು ಹೇಳಿದರು. ಪಿಯುಸಿಎಲ್​​ನ ಜನರಲ್ ಸೆಕ್ರೆಟರಿ ಅಜೋಯ್ ಡಿಸಿಲ್ವಾ ಎಂಬುವರು ಮಾತನಾಡಿ, ಹದಗೆಟ್ಟ ನಂತೂರು ಜಂಕ್ಷನ್ ರಸ್ತೆಯನ್ನು ತಕ್ಷಣ ಸರಿಪಡಿಸುವಂತೆ ಆಗ್ರಹಿಸಿ ಅರ್ಜುನ್ ಮಸ್ಕರೇನಸ್ ಎಂಬುವರು ಇವತ್ತು ಒಬ್ಬರೇ ಇಲ್ಲಿ ಮೌನ ಪ್ರತಿಭಟನೆ ನಡೆಸಿದ್ದರು. ಅದಕ್ಕಾಗಿ ನಾವು ಐದಾರು ಮಂದಿ ಗೆಳೆಯರು ಬಂದು ಅವರಿಗೆ ಸಾಥ್ ನೀಡಿದ್ದೇವೆ. ಈ ರಸ್ತೆಯ ಮೂಲಕ‌ ದಿನಾಲೂ 50 ಲಕ್ಷಕ್ಕೂ ಅಧಿಕ ವಾಹನಗಳು ಚಲಿಸುತ್ತಿರುತ್ತವೆ. ದಿವಸಕ್ಕೆ 20-30 ವಾಹನಗಳು ಅಪಘಾತಕ್ಕೊಳಗಾಗುತ್ತಿವೆ. ಆದರೆ ಈ ಅಪಘಾತ ದಾಖಲೆಯಾಗುತ್ತಿಲ್ಲ. ಯಾಕೆಂದರೆ ಇವೆಲ್ಲಾ ಸಣ್ಣಪುಟ್ಟ ಅಪಘಾತಗಳು. ಆದ್ದರಿಂದ ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಬೇಗ ಈ ರಸ್ತೆ ದುರಸ್ತಿ ಕಾರ್ಯ ನಡೆಸಲಿ ಎಂದು ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا