Urdu   /   English   /   Nawayathi

ಕಂಬಳಿ ಕೇಳಿದರೆ ಕರ್ಚಿಫ್ ನೀಡಿದ್ದಾರೆ: ಮಧ್ಯಂತರ ಪರಿಹಾರ ಬಿಡುಗಡೆ ಕುರಿತು ಪ್ರಕಾಶ್ ರಾಜ್ ವ್ಯಂಗ್ಯ

share with us

ಬೆಂಗಳೂರು: 07 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕಾಗಿ ಕೇವಲ ರೂ.1,200 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ಹೊದ್ದುಕೊಳ್ಳಲು ನಾವು ಕಂಬಳಿ ಕೇಳಿದರೆ, ಕೇವಲ ಕರ್ಚೀಫ್'ನ್ನು ಭಿಕ್ಷೆ ಕೊಟ್ಟು ಬೀಗುತ್ತಿದ್ದಾರೆಂದು ಹೇಳಿದ್ದಾರೆ. ಹೊದ್ದುಕೊಳ್ಳಲು ಕಂಬಳಿ ಕೇಳಿದರೆ, ಕೇವಲ ಕರ್ಚೀಫ್ ಭಿಕ್ಷೆ ಕೊಟ್ಟು ಬೀಗುತ್ತಿದ್ದಾರೆ ಉತ್ತರ ಕುಮಾರರು. ಪ್ರಜೆಗಳೇ ಮರಳಾಗದಿರಿ. ದೇಶದ ದುಡ್ಡು ನಮ್ಮದು. ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ. ಪ್ರಶ್ನಿಸಿವುದನ್ನು ನಿಲ್ಲಿಸಬೇಡಿ. ಯಾರೇ ಆದರೂ ನಾವು ಉಗಿಯುತ್ತಿದ್ದರೆ ಮಾತ್ರ ಕೆಲಸ ಮಾಡುವುದು ಅಲ್ವಾ? ಎಂದು ಟ್ವೀಟ್ ಮಾಡಿದ್ದಾರೆ. 

Prakash Raj✔@prakashraaj

ಹೊದ್ಕ್ಕೊಳ್ಳೊಕೆ ಕಂಬಳೀ ಕೇಳ್ದ್ರೆ .. ಕರ್ಚೀಪ್ ಭಿಕ್ಷೆ ಕೊಟ್ಟು ಬೀಗ್ತಾ ಇದಾರೆ ಉತ್ತರಕುಮಾರರು...ಪ್ರಜೆಗಳೇ.. ಮರುಳಾಗದಿರಿ ..ದೇಶದ ದುಡ್ಡು ನಮ್ದು..ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ...ಪ್ರಶ್ನಿಸೋದನ್ನ ನಿಲ್ಲಿಸ್ಬೇಡಿ...ಯಾರೆ ಆದ್ರು ನಾವು ಉಗೀತಿದ್ರೇನೆ ಕೆಲಸ ಮಾಡೊದು ಅಲ್ವಾ??

View image on TwitterView image on TwitterView image on TwitterView image on Twitter

531

9:25 AM - Oct 6, 2019

Twitter Ads info and privacy

161 people are talking about this

ತಮ್ಮ ಜೊತೆಗಿನ ಟ್ವೀಟ್ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಜನರು ಮಾಡಿರುವ ಟೀಕೆಗಳನ್ನು ಪ್ರಕಾಶ್ ಹಂಚಿಕೊಂಡಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا