Urdu   /   English   /   Nawayathi

ಕುಡಿದ ಮತ್ತಿನಲ್ಲಿ ಗಲಾಟೆ... ವೇಟರ್​​​ಗಳಿಂದ ರೂಂ ಬಾಯ್​​ ಕೊಲೆ

share with us

ಬೆಳಗಾವಿ: 30 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕುಡಿದ ಮತ್ತಿನಲ್ಲಿ ವೇಟರ್​​​ಗಳು ಹಾಗೂ ರೂಂ ಬಾಯ್ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ನಗರದ ಆರ್​​ಟಿಒ ವೃತ್ತದ‌ಲ್ಲಿರುವ ಶ್ರೀ ಸಾಯಿ ಲಾಡ್ಜ್​​ನಲ್ಲಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿ ವಿನಾಯಕ ಕಲಾಲ್ (28) ಹತ್ಯೆಯಾದ ಯುವಕ. ಎರಡು ತಿಂಗಳ ಹಿಂದೆಯಷ್ಟೇ ವಿನಾಯಕ ಲಾಡ್ಜ್​​ನಲ್ಲಿ ರೂಂ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಹೋಟೆಲ್ ಮಾಲೀಕ ತಿರುಪತಿಗೆ ಹೋಗಿದ್ದಾಗ ಲಾಡ್ಜ್​​​ನ ರೂಂವೊಂದರಲ್ಲಿ ವೇಟರ್​ಗಳು ಹಾಗೂ ರೂಂ ಬಾಯ್ ಸೇರಿಕೊಂಡು ಪಾರ್ಟಿ ಮಾಡಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ವೇಟರ್​​​ಗಳು ಹಾಗೂ ವಿನಾಯಕನ ಮಧ್ಯೆ ಗಲಾಟೆ ಆಗಿದೆ. ಆಗ ರಾಡ್​ನಿಂದ ವಿನಾಯಕನ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ವಿನಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮಾರ್ಕೆಟ್ ಠಾಣೆ ಪೊಲೀಸರು ಅಮಿತ್, ನವೀನ್ ಎಂಬುವವರನ್ನು ವಶಕ್ಕೆ ಪಡೆದಿದ್ದು, ಶಶಿಕುಮಾರ್ ಪರಾರಿ ಆಗಿದ್ದಾನೆ. ಮಾರ್ಕೆಟ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا