Urdu   /   English   /   Nawayathi

ಅಂತರ್​​ ಜಿಲ್ಲಾ ಕಳ್ಳನ ಬಂಧನ: 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ವಶಕ್ಕೆ

share with us

ಚಿಕ್ಕಮಗಳೂರು: 30 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಅಂತರ್​​ ಜಿಲ್ಲಾ ಕಳ್ಳನನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಮೂಲದ ಸೂರಜ್ ಎಂಬ ವ್ಯಕ್ತಿಯನ್ನು ಚಿಕ್ಕಮಗಳೂರು ನಗರದ ಕೋಟೆ ಕೆರೆಯ ಹತ್ತಿರ ನಗರ ಪೊಲೀಸರು ದಾಳಿ ವಶಕ್ಕೆ ಪಡೆದು, ಲಕ್ಷಾಂತರ ಮೌಲ್ಯದ ವಸ್ತಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಬಾಳೆಹೊನ್ನೂರಿನಲ್ಲಿ 2 ಅಂಗಡಿ, ಆಲ್ದೂರಿನಲ್ಲಿ 1 ಅಂಗಡಿ, ಹಾಸನ ಜಿಲ್ಲೆಯ ಬೇಲೂರಿನಲ್ಲಿ 1 ಅಂಗಡಿ, ಬೆಂಗಳೂರು ನಗರದ ವಿದ್ಯಾರಣ್ಯಪುರದಲ್ಲಿ 1 ಕಾರು ಕಳ್ಳತನ ಪ್ರಕರಣ ಸೇರಿ ಒಟ್ಟು 5 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಒಂದು ಮಾರುತಿ ಸ್ವಿಫ್ಟ್ ಕಾರು, ಹಾಂದಿ ಗ್ರಾಮದಲ್ಲಿ ಇರುವ ಶಾಲಿಮಾರ್ ಟಿವಿ ಶೋ ರೂಂನಲ್ಲಿ ಕಳ್ಳತನ ಮಾಡಿದ 23 ಟಿವಿ ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا