Urdu   /   English   /   Nawayathi

ಗೋಕಾಕ್ ನಗರಸಭೆಯಲ್ಲಿ ಅವ್ಯವಹಾರ ಆರೋಪ.. ತನಿಖೆಗೆ ಬಿಜೆಪಿ ಮುಖಂಡರ ಒತ್ತಾಯ

share with us

ಗೋಕಾಕ: 30 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕಳೆದ 20 ವಷ೯ಗಳಿಂದ ಗೋಕಾಕ್ ನಗರಸಭೆ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ತಮ್ಮ ಲಖನ್ ಜಾರಕಿಹೊಳಿ ಹಿಡಿತದಲ್ಲಿದ್ದು, ಈ ಇಬ್ಬರು ಮುಖಂಡರ ಅಪ್ಪಣೆ ಇಲ್ಲದೇ ಏನೂ ನಡೆಯುತ್ತಿರಲಿಲ್ಲ ಎಂದು ಎಂದು ಬಿಜೆಪಿ ಮುಖಂಡ ಅಶೋಕ್​ ಪೂಜಾರಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 20 ವಷ೯ಗಳಿಂದ ಗೋಕಾಕ್ ನಗರಸಭೆಯಲ್ಲಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ತಮ್ಮ ಲಖನ್ ಜಾರಕಿಹೊಳಿಯವರು ಹಿಡಿತದಲ್ಲಿದೆ. ನಗರಸಭೆಯಲ್ಲಿ ಏನಾದರೂ ನಡೆಯಬೇಕೆಂದರೆ ಈ ಇಬ್ಬರೂ ಮುಖಂಡರ ಅಪ್ಪಣೆ ಇಲ್ಲದೇ ಆಗುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅನರ್ಹ ಶಾಸಕ ರಮೇಶ್​​ ಜಾರಕಿಹೊಳಿ, ಲಖನ್​ ಚಾರಕಿಹೊಳಿ ಮತ್ತು ನಗರಸಭೆಯ 4 ನಾಲ್ಕು ಜನ ಸದಸ್ಯರು ಸೇರಿ ನಗರಸಭೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅಳಿಯ ಅಂಬಿರಾಮ್​ ಪಾಟೀಲ್​ ಆರೋಪಿಸಿದ್ದರು. ಆದರೆ, ಇಲ್ಲಿಯವರೆಗೂ ಅಂಬಿರಾವ್​​ ಪಾಟೀಲ್​ ಈ ಕುರಿತು ಸ್ಪಷ್ಟೀಕರಣ ನೀಡಿಲ್ಲ. ಇದರಿಂದ ತಾಲೂಕಿನ ಜನರಲ್ಲಿ ಸಂಶಯ ಹುಟ್ಟಿದ್ದು ಚರ್ಚೆಗೆ ಕಾರಣವಾಗಿದೆ. ಅದಕ್ಕಾಗಿ ಕೂಡಲೇ ಸರ್ಕಾರ ಈ ಕುರಿತು ಕ್ರಮಕೈಗೊಂಡು ಸಂತ್ಯಾಂಶವನ್ನು ಬಯಲಿಗೆಳೆಯಬೇಕು. ಇಲ್ಲವಾದರೆ ಪ್ರತಿಭಟಿಸುವುದಾಗಿ ತಿಳಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا