Urdu   /   English   /   Nawayathi

ಆಗ ಕುದುರೆಯಂತೆ ಓಡಿದ್ದು ಯಾರು? ರಮೇಶ್​​​ ಜಾರಕಿಹೊಳಿಗೆ ತಿಮ್ಮಾಪೂರ ತಿರುಗೇಟು

share with us

ಚಿಕ್ಕೋಡಿ: 29 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಬಿಜೆಪಿ ಪಕ್ಷ ಸೇರಬೇಕು ಅಥವಾ ಬಿಜೆಪಿ ಆಡಳಿತಕ್ಕೆ ಬರಬೇಕು ಎಂದು ನಾವು ರಾಜೀನಾಮೆ ಕೊಟ್ಟಿಲ್ಲ ಎಂಬ ರಮೇಶ್ ಹೇಳಿಕೆಗೆ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ತಿರುಗೇಟು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಗುರುಶಾಂತೇಶ್ವರ ಮಠದ ದಸರಾ ಉತ್ಸವ ಚಾಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗ ಕುದುರೆಯ ರೀತಿ ಓಡಿ ಹೋಗಿದ್ದು ಯಾರು? ವಿಶೇಷ ವಿಮಾನದಲ್ಲಿ ಸುತ್ತಿದ್ದು ಯಾರು ಎಂದು ಗೊತ್ತಿದೆ. ಬಾಂಬೆಯಲ್ಲಿ ಅವರು ಏನೇನು ಮಾಡಿದ್ರು ಎಂದು ಮಾಧ್ಯಮಗಳು ಬಿತ್ತರಿಸಿವೆ ಎಂದರು. ಅವರು ಮಾಡಿರೋದನ್ನು ಗುಡಿಸಲಲ್ಲಿ ಬದುಕುವ ಕಟ್ಟ ಕಡೆಯ ವ್ಯಕ್ತಿಯೂ ಸಹ ನೋಡಿದ್ದಾನೆ. ಅದಕ್ಕಾಗಿ ನಾನು ಮಾಧ್ಯಮದ ಬಳಿ ಮತ್ತೊಮ್ಮೆ ಮನವಿ ಮಾಡುತ್ತೇನೆ. ಅವೆಲ್ಲವನ್ನು ಮತ್ತೊಮ್ಮೆ ಜನತೆಗೆ ತೋರಿಸಿ ಎಂದು ತಿಮ್ಮಾಪುರ ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا