Urdu   /   English   /   Nawayathi

ಯಡಿಯೂರಪ್ಪ ನನಗೆ ನಂ.1 ಶತ್ರು, ಆದ್ರೂ ಅವರಿಲ್ಲ ಅಂದ್ರೆ ಇವ್ರಿಲ್ಲ: ವಾಟಾಳ್​​

share with us

ಚಾಮರಾಜನಗರ: 29 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಯಡಿಯೂರಪ್ಪ ನನ್ನ ನಂಬರ್ 1 ಶತ್ರು, ಆದರೆ ಅವರಿಲ್ಲ ಎಂದರೆ ಬಿಜೆಪಿ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಬಂಡಿಪುರದ ಮದ್ದೂರು ಚೆಕಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಬಿ.ಎಸ್.ಯಡಿಯೂರಪ್ಪ, ಸರ್ಕಾರ ತಂದವರು ಯಡಿಯೂರಪ್ಪ, ಅವರಿಲ್ಲ ಎಂದರೆ ಬಿಜೆಪಿಯೂ ಇಲ್ಲ, ಈಶ್ವರಪ್ಪನೂ ಇಲ್ಲ, ಯಾವ ಅಪ್ಪನೂ ಇಲ್ಲಾ ಎಂದಿದ್ದಾರೆ. ದಸರಾ ಆಚರಣೆ ಕುರಿತು ಮಾತನಾಡಿ, ದಸರಾ ನಾಡಹಬ್ಬ. ಆದರೆ ಯಾವ ಸರ್ಕಾರ ಬರುವುದೋ ಆ ದಸರಾ ಆಗುತ್ತಿರುವುದು ಸರಿಯಲ್ಲ. ವಿಶ್ವವಿಖ್ಯಾತ ದಸರಾ ಬರಬರುತ್ತಾ ಮೈಸೂರಿಗೆ ಸೀಮಿತವಾಗುತ್ತಿದೆ. ಆದ್ದರಿಂದ ಸಿಎಂ ನೇತೃತ್ವದಲ್ಲಿ ಸರ್ವ ಪಕ್ಷಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು ಎಂದು ಹೇಳಿದ್ರು.

'ಇಲ್ಲಿ ದರ್ಬಾರು, ಉತ್ತರ ಕರ್ನಾಟಕದಲ್ಲಿ ಕಣ್ಣೀರು'

ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಯದುವಂಶಸ್ಥ ಯದುವೀರ್ ಬಿಡಬೇಕಿತ್ತು. ದಸರಾ ದರ್ಬಾರ್ ಬಿಟ್ಟು ಉತ್ತರ ಕರ್ನಾಟಕ ಜನರ ಸಮಸ್ಯೆ ಕೇಳಬೇಕಿತ್ತು. ಉತ್ತರ ಕರ್ನಾಟಕದ ಜನ ನೀರಿನಲ್ಲಿ ಮುಳುಗಿದ್ದಾರೆ. ಮೈಸೂರಿನಲ್ಲೇ ರಾಜ್ಯದ ಎಲ್ಲಾ ಮಂತ್ರಿಗಳು, ಕೇಂದ್ರ ಸಚಿವರು ಬೀಡು ಬಿಟ್ಟಿದ್ದಾರೆ. ಪ್ರಧಾನಿ ಮೋದಿ ವೈಭವದಿಂದ ಅಮೆರಿಕಾಕ್ಕೆ ಹೋಗಿ ಬಂದಿದ್ದಾರೆ, ಕರ್ನಾಟಕಕ್ಕೇಕೆ ಅವರು ಬರಲಿಲ್ಲ? ರಾಜ್ಯದವರನ್ನು ಗುಲಾಮರಂತೆ ಕಾಣುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ಅನಿವಾರ್ಯ, ಉತ್ತರ ಕರ್ನಾಟಕಕ್ಕೆ ಅಗೌರವ ತೋರಿ ಪರಿಹಾರ ನೀಡದಿದ್ದರೆ ರಾಜ್ಯವೇ ಧಗಧಗ ಎನ್ನಲಿದೆ ಎಂದು ಎಚ್ಚರಿಸಿದರು. ಗಣಿ ಮಾಲೀಕರ ದರ್ಬಾರಿನಲ್ಲಿ ಯಾವುದೇ ಕಾರಣಕ್ಕೂ ಬಳ್ಳಾರಿ ವಿಭಜನೆ ಆಗಬಾರದು. ಯಡಿಯೂರಪ್ಪ ಚರಿತ್ರೆ ತರಿಸಿ ನೋಡಬೇಕು, ಬಳ್ಳಾರಿ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا