Urdu   /   English   /   Nawayathi

ಮಂಗಳೂರಲ್ಲಿ ಜ್ಯುವೆಲ್ಲರಿಗೆ ಕನ್ನ ಹಾಕಿದ ಖದೀಮರು... ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

share with us

ಮಂಗಳೂರು: 03 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಗರದ ಜ್ಯುವೆಲ್ಲರಿಯೊಂದಕ್ಕೆ ದುಷ್ಕರ್ಮಿಗಳು ಕನ್ನ ಹಾಕಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ನಗರದ ಭವಂತಿ ರಸ್ತೆಯಲ್ಲಿ ನಡೆದಿದೆ. ‌ಅನಿಲ್ ಶೇಟ್ ಎಂಬುವರ ಜ್ಯುವೆಲ್ಲರಿಗೆ ಖದೀಮರು ಕನ್ನ ಹಾಕಿದ್ದಾರೆ. ಜ್ಯುವೆಲ್ಲರ್​ನ ಹಿಂಭಾಗದ ಗೋಡೆಯಲ್ಲಿ ಎರಡು‌ ಅಡಿ ಚೌಕ ಅಳತೆಯಲ್ಲಿ ಗೋಡೆ ಕೊರೆದು ಅಂಗಡಿಯ ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.

jewellery shop

ಒಳ ಪ್ರವೇಶಿಸಿದ ಕಳ್ಳರು ಕಬ್ಬಿಣದ ಬಾಕ್ಸ್​ವೊಂದರಲ್ಲಿ ಚಿನ್ನಾಭರಣವಿರಿಸಿದ್ದ ಸಣ್ಣ ಬಾಕ್ಸ್ ತೆರೆದು ಕಳವು ಮಾಡಿದ್ದಾರೆ. ಬಳಿಕ ಬಾಕ್ಸ್​ಗಳ ಕವರ್​ಗಳನ್ನು ಮಳಿಗೆಯಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸೋಮವಾರ ಅಂಗಡಿ ಬಂದ್ ಆಗಿತ್ತು. ಇಂದು ಬೆಳಗ್ಗೆ ಮಳಿಗೆಯ ಬಾಗಿಲು ತೆರೆದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا