Urdu   /   English   /   Nawayathi

ಕೂಬಿಂಗ್ ವೇಳೆ ಕಾಣೆಯಾಗಿದ್ದ ಡಿವೈಎಸ್‍ಪಿ ಅವರ ತಂಡ ಮರಳಿ ಊರಿಗೆ

share with us

ಅಂಕೋಲಾ: 01 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕನಾಳ ಗ್ರಾಮದ ಮಾಸ್ತಿಕಟ್ಟಾ ಅರಣ್ಯ ಪ್ರದೇಶದಲ್ಲಿ ಕೂಬಿಂಗ್ ಸಲುವಾಗಿ ತೆರಳಿ ನಾಪತ್ತೆಯಾಗಿದ್ದ ಡಿವೈಎಸ್‍ಪಿ ಶಂಕರ್ ಮಾರಿಹಾಳ್ ಅವರ ತಂಡ ಇಂದು ಸುರಕ್ಷಿತವಾಗಿ ಹಿಂದಿರುಗಿದ್ದಾರೆ ಎನ್ನಲಾಗಿದೆ. ಪ್ರಕರಣವೊಂದನ್ನು ಸಂಬಂಧಿಸಿ ಮಾಹಿತಿ ಕಲೆ ಹಾಕಲು ಡಿವೈಎಸ್‍ಪಿ ಶಂಕರ್ ಮತ್ತು ಪೋಲೀಸ್ ಇಲಾಖೆಯ 12 ಜನ ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿ ರವೀಂದ್ರ ಮತ್ತು ಅರಣ್ಯ ಇಲಾಖೆಯ ಐವರು ಹಾಗೂ ಇತರ ನಾಲ್ಕು ಸಿಬ್ಬಂದಿಗಳ ತಂಡ ಮಾಸ್ತಿಕಟ್ಟಾ ಅರಣ್ಯದಲ್ಲಿ ಭಾನುವಾರ ಬೆಳಿಗ್ಗೆ ಸಮಾರು 9:30ಕ್ಕೆ ತೆರಳಿತ್ತು. ಸಂಜೆಯವರೆಗೆ ನಡೆದ ಕಾರ್ಯಾಚರಣೆಯ ವೇಳೆ ಇವರಿಗೆ ಚಿರತೆ ಕಾಣಿಸಿಕೊಂಡ ಕಾರಣ ಡಿವೈಎಸ್‍ಪಿ ಮತ್ತು ರವೀಂದ್ರ ಕುಮಾರ್ ಅವರು ತಂಡದಿಂದ ಬೇರ್ಪಟ್ಟಿದ್ದರು. ಇವರನ್ನು ಹುಡುಕುತ್ತಾ ರಾತ್ರಿಯಾಗಿದ್ದು, ಮಳೆ ಕೂಡ ಹೆಚ್ಚಾಗಿದ್ದ ಕಾರಣ ರಾತ್ರಿಯ ವೇಳೆ ಇವರನ್ನು ಹುಡುಕುವುದು ಕಷ್ಟವಾಯಿತು. ನಂತರ ಬೆಳಿಗ್ಗೆ ಸುಮಾರು 6ಗಂಟೆಗೆ ಇವರು ಸಿಕ್ಕಿದ್ದು, ಸುರಕ್ಷಿತವಾಗಿ ಎಲ್ಲರನ್ನು ಊರಿಗೆ ಕರೆತರಲಾಯಿತು ಎಂದು ಹೇಳಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا