Urdu   /   English   /   Nawayathi

ಜಾಮೀನಿಗಾಗಿ ರೆಡ್ಡಿ 40 ಕೋಟಿ ರೂ. ಆಫರ್​ ಕೊಟ್ಟಿದ್ದು ನಿಜ... ಕೋರ್ಟ್​ನಲ್ಲಿ ನಿವೃತ್ತ ಜಡ್ಜ್​ ಸಾಕ್ಷಿ

share with us

ಹೈದರಾಬಾದ್​: 28 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಅಕ್ರಮ ಗಣಿಗಾರಿಕೆ ಸಂಬಂಧ ಬಂಧಿತರಾಗಿದ್ದ ಗಾಲಿ ಜನಾರ್ದನ ರೆಡ್ಡಿ, ತಮ್ಮ ಜಾಮೀನಿಗಾಗಿ ಹಣ ನೀಡಿದ್ದರು ಎನ್ನಲಾದ ಪ್ರಕರಣ ಸಂಬಂಧ ಕೋರ್ಟ್​ಗೆ ಹಾಜರಾದ ನಿವೃತ್ತ ನ್ಯಾಯಾಧೀಶ ನಾಗ ಮಾರುತಿ ಶರ್ಮಾ ಅವರು, ರೆಡ್ಡಿ ತಮಗೆ 40 ಕೋಟಿ ರೂ. ಆಫರ್​ ಕೊಟ್ಟಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. 2012ರಲ್ಲಿ ತಾವು ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾಗ ಅಕ್ರಮ ಗಣಿಗಾರಿಕೆ ಸಂಬಂಧ ಬಂಧಿತರಾಗಿದ್ದ ರೆಡ್ಡಿ ಜಾಮೀನಿಗಾಗಿ ಅಧಿಕಾರಿಯೊಬ್ಬರಿಂದ 40 ಕೋಟಿ ರೂಪಾಯಿ ಲಂಚದ ಆಫರ್​ ಕೊಡಿಸಿದ್ದರು, ಎಂದು ಸೋಮವಾರ ಇಲ್ಲಿನ ಸ್ಥಳೀಯ ಕೋರ್ಟ್​ಗೆ ಹಾಜರಾದ ಶರ್ಮಾ ಹೇಳಿದ್ದಾರೆ. ಶರ್ಮಾ ಅವರು ಎಸಿಬಿ ಕೋರ್ಟ್​ನಲ್ಲಿ ಇದೇ ಹೇಳಿಕೆ ನೀಡಿದ್ದರು. ಲಂಚದ ಆಮಿಷವೊಡ್ಡಿದಾಗ ನಾನು ಸುತಾರಾಂ ಒಪ್ಪಲಿಲ್ಲ ಎಂದು ಅವರು ಕೋರ್ಟ್​ಗೆ ತಿಳಿಸಿದ್ದರು. ಜಾಮೀನಿಗಾಗಿ ಲಂಚ ಪ್ರಕರಣದ ವಿಚಾರಣೆಯು ಇಲ್ಲಿನ ಸ್ಥಳೀಯ ಎಸಿಬಿ ಕೋರ್ಟ್​ನಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್​ 12ಕ್ಕೆ ಮುಂದಿನ ವಿಚಾರಣೆ ದಿನಾಂಕ ನಿಗದಿಪಡಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا