Urdu   /   English   /   Nawayathi

ತಾಯಿ-ಮಗಳ ಬರ್ಬರ ಕೊಲೆ... ಮುಗಿಲು ಮುಟ್ಟಿದ ಅಪ್ಪ-ಮಗನ ಆಕ್ರಂದನ!

share with us

ಪೂರ್ವ ಗೋದಾವರಿ: 25 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಆ ದಂಪತಿಗೆ ಆರತಿಗೊಂದು, ಕೀರ್ತಿಗೊಂದು ಗಂಡು-ಹೆಣ್ಣು ಮಕ್ಕಳಿದ್ದರು. ಆದ್ರೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಆ ಕುಟುಂಬ ತಾಯಿ-ಮಗಳನ್ನು ಕಳೆದುಕೊಂಡಿದೆ. ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಪುರಂ ನಿವಾಸಿ ಶ್ರೀನಿವಾಸ ಮತ್ತು ಆತನ ಮಗ ವಿಜಯ್​ ಕಾಕಿನಾಡಿನ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ಇವರು ತಮ್ಮ ಊರಿಗೆ ಭೇಟಿ ನೀಡುತ್ತಿದ್ದರು. ಇದೇ ಸಮಯ ದುಷ್ಕರ್ಮಿಗಳಿಗೆ ಕೊಲೆ ಮಾಡಲು ಅವಕಾಶ ಸಿಕ್ಕಿದಂತಾಗಿದೆ. ಇನ್ನು ಶ್ರೀನಿವಾಸ್​ ಪತ್ನಿ ಬಲಸ ಮಾಧವಿ (45) ಮತ್ತು ಮಗಳು ಕರುಣಾ (18) ಸ್ವಗ್ರಾಮದಲ್ಲಿದ್ದರು. ತಾಯಿ ಮಾಧವಿ ಖಾಸಗಿ ಶಾಲೆಯಲ್ಲಿ ಆಯಾ ಕೆಲಸಕ್ಕೆ ತೆರಳುತ್ತಿದ್ದು, ಮಗಳು ಕರುಣಾ ಪಿಯು ಮುಗಿಸಿ ಮನೆಯಲ್ಲೇ ಇದ್ದಳು. ಗಂಡ, ಮಗ ಇಲ್ಲದ ವೇಳೆ ನೋಡಿದ ದುಷ್ಕರ್ಮಿಗಳು ತಾಯಿ-ಮಗಳ ತಲೆಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ಪೊಲೀಸರಿಗೆ ತಿಳಿದಿದ್ದು, ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ವಿಜಯ್​ ಮತ್ತು ಕುಟುಂಬದವರನ್ನು ಕಳೆದುಕೊಂಡ ಶ್ರೀನಿವಾಸ್​ ರೋದನೆ ಮುಗಿಲು ಮುಟ್ಟಿತ್ತು. ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا