Urdu   /   English   /   Nawayathi

ಗುಂಡು ಹಾರಿಸಿಕೊಂಡು ಸಿಆರ್‌ಪಿಎಫ್ ಅಧಿಕಾರಿ ಆತ್ಮಹತ್ಯೆ

share with us

ನವದೆಹಲಿ: (ಪಿಟಿಐ) 24 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕಾಶ್ಮೀರದಲ್ಲಿ ಕರ್ತವ್ಯ ನಿಯೋಜಿತರಾಗಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಅಧಿಕಾರಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸದಾರ್ ಪ್ರದೇಶದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಸಿಆರ್‌ಪಿಎಫ್ ನ 40ನೆ ಬೆಟಾಲಿಯನ್‍ನ ಅಸಿಸ್ಟಂಟ್ ಕಮ್ಯಾಂಡ್‍ಡೆಂಟ್(ಸಹಾಯಕ ಸಮಾದೇಷ್ಟ) ಆಗಿದ್ದ ಎಂ. ಅರವಿಂದ್(33) ಸಾವಿಗೆ ಶರಣಾದ ಅರೆಸೇನಾಪಡೆ ಅಧಿಕಾರಿ. ತಮ್ಮ ಮನೆಯಲ್ಲೇ ಅವರು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ. ತಮಿಳುನಾಡಿನ ಕೊಯಮತ್ತೂರಿನ ಅರವಿಂದ್ 2014ರಲ್ಲಿ ಸಿಆರ್‌ಪಿಎಫ್ ಗೆ ಸೇರ್ಪಡೆಯಾಗಿದ್ದರು. ರಜೆಯಲ್ಲಿದ್ದ ಅವರು ಆ.14ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಅವರ ಪತ್ನಿ ಆಗಸ್ಟ್ 20ರಂದು ಶ್ರೀನಗರಕ್ಕೆ ತೆರಳಿದ್ದರು. ಅರವಿಂದ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ವೈವಾಹಿಕ ಮನಸ್ತಾಪದಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا