Urdu   /   English   /   Nawayathi

ಮುರ್ಡೇಶ್ವರ ಮೀನುಗಾರರಿಂದ ಪ್ರತಿಭಟನೆ

share with us

ಮುರ್ಡೇಶ್ವರ: 20 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಮರ್ಡೇಶ್ವರದ ಕಡಲ ತೀರದಲ್ಲಿ ಮೀನುಗಾರರು ನಿರ್ಮಿಸುತ್ತಿದ್ದ ಸಿಮೆಂಟ್ ಕಟ್ಟೆಯ ಕಾರ್ಯವನ್ನು ಪಿಡಿಓ ನಿಲ್ಲಿಸಿದ ಕಾರಣ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಕಡಲ ತೀರದಲ್ಲಿ ದೋಣಿಗಳನ್ನು ನಿಲ್ಲಿಸಲು ಸಿಮೆಂಟಿನಿಂದ ಇಳಿದಾಣ ನಿರ್ಮಿಸಲಾಗಿದೆ. ಈ ಜಾಗದಲ್ಲಿ ಕೆಲವು ಖಾಸಗಿ ವಾಹನಗಳು ಪಾರ್ಕಿಂಗ್ ಮಾಡುತ್ತಿದ್ದು, ಮೀನುಗಾರರಿಗೆ ದೋಣಿ ತೆಗೆಯಲು ತೊಂದರೆಯಾಗುತ್ತಿದ್ದು, ಕೆಲವು ದೋಣಿಗಳಿಗೆ ಹಾನಿ ಕೂಡ ಆಗಿತ್ತು ಎಂದು ಹೇಳಿದ್ದಾರೆ. ಆದ ಕಾರಣ ಆ ಜಾಗದಲ್ಲಿ ಸಿಮೆಂಟಿನ ಸಣ್ಣ ಗೇಟಿನ ರೂಪದಲ್ಲಿ ನಿರ್ಮಾಣ ಮಾಡುತ್ತಿದ್ದ ವೇಳೆ ಭಟ್ಕಳದ ಇಓ ಮತ್ತು ಪಿಡಿಓ ನಿರ್ಮಾಣದ ಕಾರ್ಯವನ್ನು ನಿಲ್ಲಿಸಿ ಅದನ್ನು ತೆರವುಗೊಳಿಸಲು ಆದೇಶಿದ್ದರು. ಆದರೆ ಸ್ಥಳೀಯರು ಪುನಃ ನಿರ್ಮಾಣದ ಕಾರ್ಯ ನಡೆಸಲು ಕಲ್ಲು, ಮರಳು ಮತ್ತು ಕಬ್ಬಿಣದ ರಾಡುಗಳನ್ನು ತಂದಿದ್ದರು. ಆಗಸ್ಟ್ 15ರಂದು ಭಟ್ಕಳದ ಇಓ ಹಾಗೂ ಪಿಡಿಓ ಅವರು ಈ ನಿರ್ಮಾಣದ ಕಾರ್ಯವನ್ನು ನಿಲ್ಲಿಸಲು ಆದೇಶಿಸಿ, ಅಲ್ಲಿದ್ದ ಸಾಮಾಗ್ರಿಗಳನ್ನು ತಮ್ಮ ವಶಕ್ಕೆ ಪಡೆದ ಕಾರಣ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا