Urdu   /   English   /   Nawayathi

ಗೋವಾ-ಕರ್ನಾಟಕ ರೈಲು ಮಾರ್ಗದಲ್ಲಿ ಕುಸಿತ: ಗ್ರಾಮಸ್ಥರ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ!

share with us

ಬೆಳಗಾವಿ: 05 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ. ಪರಿಣಾಮ ಗೋವಾ-ಕರ್ನಾಟಕ ನಡುವಿನ ರೈಲು ಮಾರ್ಗದಲ್ಲಿ ಸಂಭವಿಸಬೇಕಿದ್ದ ಭಾರಿ ಅನಾಹುತವೊಂದು ಗ್ರಾಮಸ್ಥರ ಸಮಯಪ್ರಜ್ಞೆಯಿಂದ ತಪ್ಪಿದೆ. ಬೆಳಗಾವಿ ಬಳಿಯ ಲೋಂಡಾ-ಗೋವಾ ನಡುವಿನ ರೈಲು ಮಾರ್ಗದಲ್ಲಿ ಮಣ್ಣು ಕುಸಿತವನ್ನು ಕಂಡ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ದುರಸ್ತಿ ಕಾಮಗಾರಿ ಕೈಗೊಂಡರಾದರೂ ಮಳೆಯ ಕಾರಣದಿಂದಾಗಿ ದುರಸ್ತಿಗೆ ಅಗತ್ಯವಿದ್ದ ಸರಕುಗಳು ತಲುಪಲು ಸಾಧ್ಯವಾಗದೇ ವಾಸ್ಕೋ-ನಿಜಾಮುದ್ದೀನ್ ಗೋವಾ ಎಕ್ಸ್ ಪ್ರೆಸ್ ರೈಲು ಭಾಗಶಃ ರದ್ದುಗೊಂಡಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا