Urdu   /   English   /   Nawayathi

ಪತ್ರಕರ್ತನ ಬೈಕ್​​​ ಅಪಘಾತ ಕೇಸ್: ಆಸ್ಪತ್ರೆಯಲ್ಲೆ ಐಎಎಸ್​​​ ಅಧಿಕಾರಿಗೆ ಶಿಕ್ಷೆ ವಿಧಿಸಿದ ಜಡ್ಜ್

share with us

ತಿರುವನಂತಪುರ: 04 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಪತ್ರಕರ್ತನ ಬೈಕ್​ ಮೇಲೆ ಕಾರು ಚಲಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಮಣ್ ಅವರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸರ್ವೆ ಡೈರೆಕ್ಟರ್​ ಶ್ರೀರಾಮ್​ ವೆಂಕಟರಮಣ್ ಕಾರು ನಿಂತಿದ್ದ ಬೈಕ್​ಗೆ ಗುದ್ದಿದ ಪರಿಣಾಮ ಸಿರಾಜ್ ಪತ್ರಿಕೆಯ ಪತ್ರಕರ್ತ ಕೆ.ಎಂ.ಬಶೀರ್​ ಸಾವಿಗೀಡಗಿದ್ದರು. ಸಣ್ಣಪುಟ್ಟ ಗಾಯಗಳಿಗಿದ್ದ ಐಎಎಸ್​ ಅಧಿಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಆಗಮಿಸಿದ ನ್ಯಾಯಾಧೀಶರು ಐಎಎಸ್ ಅಧಿಕಾರಿ​ ಶ್ರೀರಾಮ್​ ವೆಂಕಟರಮಣ್ ಅವರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. ರ‍್ಯಾಶ್ ಡ್ರೈವಿಂಗ್ ಸೇರಿದಂತೆ ಜಾಮೀನು ರಹಿತ ಕೇಸ್​ನ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಐಎಎಸ್​ ಅಧಿಕಾರಿ ಗುಣಮಖರಾಗುವವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا