Urdu   /   English   /   Nawayathi

ಬ್ಯಾಗ್‌ ದೋಚಿದ ದುಷ್ಕರ್ಮಿಗಳು ತಾಯಿ ಮಗಳನ್ನು ಚಲಿಸುವ ರೈಲಿಂದ ಹೊರ ತಳ್ಳಿದ್ರು!

share with us

ಮಾಥುರಾ(ಉತ್ತರ ಪ್ರದೇಶ): 04 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ನವದೆಹಲಿಯಿಂದ ರಾಜಸ್ಥಾನದ ಕೊಟಗೆ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗಳಿಂದ ಹಣವಿದ್ದ ಬ್ಯಾಗ್ ದೋಚಿದ ದುಷ್ಕರ್ಮಿಗಳು ಇಬ್ಬರನ್ನೂ ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದ್ದಾರೆ ಎಂದು ರೈಲ್ವೆ ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ದೆಹಲಿ ಮೂಲದ ಮೀನ, ಪುತ್ರಿ ಮನಿಷಾ ಮತ್ತು ಪುತ್ರ ಆಕಾಶ್ ನಿಜಾಮಾಬಾದ್ ರೈಲಿನಲ್ಲಿ ದೆಹಲಿಯಿಂದ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಕೆಲ ದರೋಡೆಕೋರರು ಮೀನಾ ಬಳಿ ಇದ್ದ ಬ್ಯಾಗ್​ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಕೆ ಪ್ರತಿಭಟಿಸಿದ್ದಾಳೆ. ಆದರೆ ಬ್ಯಾಗ್​ ಕಿತ್ತುಕೊಂಡ ಓರ್ವ ವ್ಯಕ್ತಿ ಬಾಗಿಲ ಬಳಿ ಹೋಗಿದ್ದಾನೆ. ಬ್ಯಾಗ್‌ ಪಡೆದುಕೊಳ್ಳಲು ಆತನ ಹಿಂದೆಯೇ ಬಂದ ತಾಯಿ ಮತ್ತು ಮಗಳನ್ನು ಚಲಿಸುತಿದ್ದ ರೈಲಿನಿಂದ ದುಷ್ಕರ್ಮಿ ಹೊರ ನೂಕಿದ್ದಾನೆ. ಗಲಾಟೆ ನಡೆಯುವಾಗಲೇ ಪುತ್ರ ಆಕಾಶ್​ ರೈಲಿನ ತುರ್ತು ಚೈನ್​ ಎಳೆದು ಟ್ರೈನ್​ ನಿಲ್ಲಿಸಿ, ರಕ್ಷಣಾ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಆಂಬುಲೆನ್ಸ್​ ಬರುವ ವೇಳೆಗಾಗಲೇ ತಾಯಿ ಮತ್ತು ಸಹೋದರಿ ಇಬ್ಬರೂ ಮೃತಪಟ್ಟಿದ್ದರು ಎಂದು ಆಕಾಶ್​ ತಿಳಿಸಿದ್ದಾರೆ. ದರೋಡೆ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا