Urdu   /   English   /   Nawayathi

ಮುಂದುವರೆದ ವೈದ್ಯರ ಮುಷ್ಕರ: ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

share with us

ನವದೆಹಲಿ: 03 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಖಂಡಿಸಿ ನವದೆಹಲಿಯಲ್ಲಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಇಂದು ಸಹ ಮುಂದುವರೆದಿದೆ. ಖಾಸಗಿ ಹಾಗೂ ಸರ್ಕಾರ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದು, ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ. ಆದರೆ, ತುರ್ತು ಸೇವೆಗಳು ಮಾತ್ರ ಎಂದಿನಂತೆ ನಡೆಯುತ್ತಿವೆ. ಸಫ್ದರ್​ಜಂಗ್​​​ ಹಾಗೂ ಏಮ್ಸ್​ ಆಸ್ಪತ್ರೆಯ ವೈದ್ಯರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದರಿಂದ ಜನರು ಚಿಂತೆಗೀಡಾಗಿದ್ದಾರೆ. ಅಸೋಸಿಯೇಷನ್ ಆಫ್​ ರೆಸಿಡೆಂಟ್​ ಡಾಕ್ಟರ್ಸ್​ ಆಫ್ ಪೋಸ್ಟ್​ ಗ್ರಾಜುಯೇಟ್​ ಇನ್ಸ್​ಟಿಟ್ಯೂಟ್​ ಆಫ್ ಮೆಡಿಕಲ್ ಎಜುಕೇಷನ್ ಅಂಡ್​ ರೀಸರ್ಚ್​ (ARD PGI) ನೀಡಿರುವ ಮಾಹಿತಿಯಂತೆ, ತುರ್ತು ಸೇವೆಗಳ ಹೊರತಾಗಿ ಮತ್ತೆಲ್ಲ ಸೇವೆಗಳು ಅನಿರ್ಧಿಷ್ಟಾವಧಿವರೆಗೆ ದೊರೆಯುವುದಿಲ್ಲ. ಎನ್​ಎಂಸಿ ವಿಧೇಯಕದ ವಿರುದ್ಧ ದೇಶಾದ್ಯಂತ ವೈದ್ಯರು ಪ್ರತಿಭಟನೆ ಮುಂದುವರೆಸಲಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا