Urdu   /   English   /   Nawayathi

ವಿದ್ಯುತ್ ಸ್ಪರ್ಶದಿಂದ ಅವಘಡ: ಇಬ್ಬರು ಕಾರ್ಮಿಕರು ಸಾವು

share with us

ಕಲಬುರಗಿ: 25 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕಟ್ಟಡ ನಿರ್ಮಾಣ ವೇಳೆ ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಗೋಕುಲ ನಗರದಲ್ಲಿ ನಡೆದಿದೆ. ಖಾದ್ರಿ ಚೌಕ್ ನಿವಾಸಿ ಗಪೂರ್ ದೊಡಮನಿ (40), ಡಬರಾಬಾದ್ ನಿವಾಸಿ ಅಮ್ಜದ್ (35) ಮೃತ ದುರ್ದೈವಿ ಕಾರ್ಮಿಕರು. ಗೋಕುಲ ನಗರದ ಗಂಗಾಧರ ಎಂಬುವವರ ಮನೆ ನಿರ್ಮಾಣದ ವೇಳೆ ಕಬ್ಬಿಣದ ರಾಡ್ ಮೇಲಕ್ಕೆ ಎತ್ತಿದಾಗ, ರಾಡ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರಿಕ್ಷೆಗಾಗಿ ಮೃತ ದೇಹಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا